ಗುರುವಾರ

ನಾನೂ ಸಮುದ್ರವಾಗಬಾರದಿತ್ತಾ?

ಹರಿಯುತ್ತಿದ್ದರೆ ನದಿ ಆಗುತ್ತಾ, ಯಾರಿಗೆ ಗೊತ್ತು, ಸಮುದ್ರವು ಅಗ್ಬಹುದಲ್ಲ?.ನಿಜ.
ಹೊಳೆಯೂ ಅಗಬಹುದು!
ನನ್ನ ಊರ ಕಡೆಯಲ್ಲ,'ಹೊಳೆ' ಎಂದೂ ಕರೆಯುತ್ತಾರೆ.
ನಾನೂ ಸಮುದ್ರವಾಗಬಾರದಿತ್ತಾ?!
(ಹರಿ , ಹೊಳೆ ಎರಡಕ್ಕೂ ಹಲವು ಅರ್ಥಗಳಿದ್ದಾವೆ ನಮ್ಮ ಕನ್ನಡದಲ್ಲಿ.)

ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಮತ್ತೆಲ್ಲಿಗೋ. ಹುಡುಕಾಟ ಕೆಲವರಿಗೆ ಹುಡುಗಾಟವೆನ್ನಿಸಬಹುದು.ಅದರೆ ಹಲವರಿಗೆ ?
ಗೊತ್ತಿಲ್ಲಾ. ಯಾಕೋ ಅಲ್ಲೊಂದು ಕೂಗು, ಇಲ್ಲೊಂದು ಅಳಲು, ಮನದ ಕದ ತಟ್ಟಿ ಹಾಗೆಯೇ ಹಾರಿಹೋಗುತ್ತಿವೆ. ಅಮ್ಮಂಗೆ ಅವತ್ತು ಅನಿಸಿದ್ದು ನನಗೆ ಇವತ್ತಿಗೂ ಸಲ್ಲುವಂತಿದೆ.

ಧೃತ್ ಯಾವಾಗಲೂ ಹೀಗೆಯೆ; ಮಾತಿಗೆ ಸಿಕ್ಕಿದರೆ, ಎಲ್ಲಿಂದ ಎಲ್ಲಿಗೋ ಹಾರಿ,ತೇಲಿ,ನೆಗೆದು,ಜಿಗಿದು ಹೋಗಿಬಿಡುತ್ತಾನೆ. ಬಿಡೊ ಮಾರಾಯ, ಒಂದಕ್ಕೊಂದು ತಾಳೆ ಅಗ್ಲಿಕ್ಕಿಲ್ಲ ನಿನ್ನ ಮಾತು ಅಂದರೆ ತಟ್ಟನೆ ಸುಮ್ಮನಾಗಿಬಿಡುತ್ತಾನೆ. ಅಲ್ಲೊಂದು ತಣ್ಣನೆಯ ಮೌನ ಆವರಿಸಿಬಿಡುತ್ತದೆ. ಅದೊಂದು ಅಸಹನೀಯ ಮೌನ, ಮತ್ತೆ ನಾನೇ ಕೆದಕಿ ಕೇಳಬೇಕು, ಏನಾಯ್ತೋ ನಿಂಗೆ?

ಏನಿಲ್ಲಾಕ್ಕ, ಹಾಗೆ ಸುಮ್ಮನೆ, ಅಂದು ಸುಮ್ಮನಾಗಿಬಿಟ್ಟ. ಯಾಕೋ ಎಲ್ಲೋ ಏನೋ ಎಡವಟ್ಟಾಗಿದೆ, ಎಂಬ ಸೂಚನೆ ಆಗಲೆ ಸಿಕ್ಕಿಯಾಗಿತ್ತು ನನಗೆ.

ಅಕ್ಕಾ, ಬಂಗಾಳ ಕೊಲ್ಲಿಯತರ ನೀನು ಅಂದ. ಅಬ್ಬರ ಜಾಸ್ತಿ, ಅದಕ್ಕೆ ನೀನು ಹೇಳುವದಕ್ಕೆ, ಮಾತಿಗೆ  ಇಲ್ಲವೆನುವದಕ್ಕಾಗುವದಿಲ್ಲ.
ಮೊನ್ನೆ ನೋಡಿಬಂದೆ.ಯಾಕೋ ಆ ಸಮುದ್ರ ನನ್ನ ನಿದ್ದೆ ಗೆಡಿಸಿದೆ, ಆ ಸಂಜೆಯ ಹೊತ್ತಲ್ಲಿ, ಫ್ಲೊರೆಸೆಂಟ್ ದೀಪದ ಬದಿಯಲ್ಲಿ ಕುಳಿತು ಸಮುದ್ರ ನೋಡುವದಿದೆಯಲ್ಲಾ..ಅಹ್.

ಯಾವದಕ್ಕೋ ಪೀಠಿಕೆ ಅನ್ನಿಸಿತ್ತು.
ಅಕ್ಕ, ಸರಯು ಸಿಕ್ಕಿದ್ದಳು ಅಂದ.
ಯಾವ ಸರಯೂ? ಅಂದೆ.ಗೊತ್ತಿಲ್ಲದವಳಂತೆ.
ಆ ಕಲ್ತುಡ್ಕ ನಿಂಗನ ಮಗಳು..
ಯಾಕೋ ಅಷ್ಟು ಹೊತ್ತು ಇದ್ದ ಉತ್ಸಾಹ ಧೃತ್ ನಲ್ಲಿ ಮಾಯವಾಗಿತ್ತು.

'ಸಿಟ್ಟು ಮಾಡಿ ಹಿಂದೆ ಹೋದ ಸಮುದ್ರದ ಅಲೆಗಳು ಮತ್ತೆ ದಡಕ್ಕೆ ಬಾರದಿರುತ್ತವೆಯೇ',ಅಂದೆ. ಅಪರೂಪದ 'ತಮ್ಮ' ಬಿಡು ನೀನು.

'ಹಿಂದೆ ಕಳೆದು ಹೋದ ಅಲೆಯೇ ಅದು, ಅಂತ ಸಾರಿ ಹೇಳಲಿಕ್ಕೆ ಯಾವ ಬಂಡೆಗೆ ಮಾತು ಬರುತ್ತದೆ ಹೇಳು ಅಕ್ಕಾ', ಅಂದ.

ಅದು ಹೌದು, ಬಂಡೆಗಳಿಗೆ ಮಾತಾಡುವ ತಾಳ್ಮೆ ಎಲ್ಲಿಂದ ಬರಬೇಕೋ ಮಾರಾಯ, ದಿನವಿಡೀ ಅಬ್ಬರ ಸಹಿಸಿ ಸಾಕಾಗಿರುತ್ತದೆ ಅಂದೆ. ಜೊತೆಗೆ ಮರಳಿ ಬರುವ ಅಲೆಗಳೇನು ಶಾಂತವಾದುದವಾ? ಹೊಸದು ಹೊಸದು ಬಂದಂತೆ, ಅಬ್ಬರ ಹೆಚ್ಚುತ್ತಾ ಪೌರ್ಣಮಿಯ ಇದುರು ಬಂದಾಗ ಮಹಾ ಕಾಳಿಯ ಅವತಾರವೇ ಅಲ್ಲವ?

ಕಾಳಿಯೋ ಚಂಡಿಯೋ ನನ್ನ ವ್ಯಾಪ್ತಿ ಮೀರಿದ್ದು ಅನ್ನಿಸಿದೆ. ಅದಿಕ್ಕೆ ಹೇಳಿದ್ದು, ನಾನೂ ಸಮುದ್ರವಾಗಬಾರದಿತ್ತಾ? ಸದಾ ಹರಿಯುತ್ತಲೇ ಇರಬಹುದಿತ್ತು.

ಹೋಗಿ ಆ ಮರಳುಗಳನ್ನು ಕೇಳು ನನಗೇನು ಗೊತ್ತು,ಅಂದೆ. ಎಷ್ಟೇ ಹರಿಯುತ್ತಿದ್ದರು ಒಂದು ದಿನ ದಡ ಸೇರಲೇ ಬೇಕಲ್ಲ ಅಂದೆ. ಅಲ್ಲಿಗೆ ಒಂದು ಅಲ್ಪವಿರಾಮ ಬಿದ್ದಿತ್ತು ನಮ್ಮ ಮಾತಿಗೆ.

ಬಿಡಿಸಿ ಹೇಳುತ್ತಾನೆಂದು ಕಾದೆ, ಅದೇನೆಂದು ಕೊನೆಗೂ ಹೇಳಲೇ ಇಲ್ಲ. ಅವ ಯಾವಾಗಲೂ ಹಾಗೆಯೇ.

ಶುಕ್ರವಾರ

ಯಾರ್ಗು ಹೇಳೊದಿಲ್ಲಾಂತ ಅಂದುಕೊಂಡಿದೀನಿ

ಏಕಾಂತದಷ್ಟು ಪ್ರಿಯವಾದದ್ದು ಜೀವನದಲ್ಲಿ ಇನ್ನೇನು ಇರಲಿಕ್ಕಿಲ್ಲ ನನಗೆ. ನನ್ನದೊಂದು ಪುಟ್ಟ ಲೋಕವೇ ತೆರೆದುಕೊಳ್ಳುತ್ತದೆ. ದಿನದ ಗದ್ದಲದ ದಣಿವಾರಿಸಿ, ಮುಂದಿನ ದಿನಕ್ಕೆ ಬೇಕಾಗುವಷ್ಟು ಶಕ್ತಿ ತುಂಬಿಸಿಕೊಳ್ಳಲಿಕ್ಕೆ ನನಗಿರುವ ಸಾಧನವೇ ಇದು.


ಅದಕೆಂದೇ ವೀಕೆಂಡ್ ಗಳಂದು ಮನೆಯಿಂದ ಹೊರಬೀಳುವದಕ್ಕೂ ಯೋಚನೆ ಮಾಡುತ್ತೇನೆ, ತೀರಾ ಅನಿವಾರ್ಯವಾದರೆ ಮಾತ್ರ ಹೋಗುವದು, ಮಿಕ್ಕೆಲ್ಲ ಸಮಯ ನನ್ನ ಪುಟ್ಟ ಗೂಡೊಳಗೆ ಬಚ್ಚಿಟ್ಟುಕೊಳ್ಳಲಿಕ್ಕೆ ಹಂಬಲಿಸುತ್ತೇನೆ.

ಅಲ್ಲೊಂದು ಪುಟ್ಟ ಸಂವಾದ ನಡೆಯುತ್ತದೆ, ಚಿಂತನ, ಮಂಥನಗಳೆರಡೂ ನಡೆಯುತ್ತದೆ. ಯಾವತ್ತೋ ಪೂರ್ತಿ ಓದಲಾಗದ ಪುಸ್ತಕವೊಂದು ನೆನಪಾಗುತ್ತದೆ, ಪದೆ ಪದೇ ಕೂತು ನೋಡಿದ ಸಿನೆಮಾದ ಸಂಭಾಷಣೆಯೊಂದು ನೆನಪಾಗುತ್ತದೆ.
ಮುಂದೆ ಓದಲಾಗದೆ ಅರ್ಧಕ್ಕೆ ಬಿಟ್ಟ, ರುಚಿ ಇಲ್ಲದ ಪುಸ್ತಕವೊಂದು ಕಣ್ಣಿಗೆ ಬಿದ್ದು, ತಥ್,ಸುಮ್ನೆ ನಾನ್ನೂರು ರುಪಾಯಿ ದಂಡಮಾಡಿದೆ ಎನ್ನುವ ಕೊರಗೊಂದು ಹೊಕ್ಕಿಹೋಗುತ್ತದೆ.

ಇವತ್ತು ಅಲ್ಲೆಲ್ಲ ಹರಡಿದ್ದ ಎಲ್ಲ ವಸ್ತುಗಳನ್ನು ಎತ್ತಿ ಸರಿಯಾಗಿ ಇಡಬೇಕು, ಸ್ನೇಹಿತೆ ಮೀರಾಳಲ್ಲಿ ಮನೆಯ ಒಳಾಂಗಣ ಅಲಂಕಾರದ ಬಗ್ಗೆ ಸಲಹೆ ಕೇಳಿ ಮನೆಯಲ್ಲ ಅಲಂಕರಿಸಬೇಕು.

ಅದು ಇದು, ಅದು ಇದು, ಅದು ಇದು ಅಹಾ, ಇದು ಮುಗಿಯುವದೆ ಇಲ್ವಲ್ಲಾ...!
ಅದರೂ ಅದರಿಂದ ನನಗೊಂದಿಷ್ಟು ನೆಮ್ಮದಿ ಸಿಗುತ್ತದೆ
ಮನಸಿಗೆ ಬಂದಾಗ ಒಂದಿಷ್ಟು ದಿನ ಕೆಲಸಕ್ಕೆ ರಜೆ ಹಾಕಿ ಸುಮ್ಮನೆ ಮನೆಯೊಳಗೆ ಇರುತ್ತೇನೆ. ನಡುಬೇಸಗೆಯ ಮಧ್ಯಾನ್ಹ, ಆಫಿಸಿಂದ ಎದ್ದು ಮನೆಯೊಳಗೆ ಓಡಿಬಿಡುತ್ತೇನೆ, ಮೊಬೈಲ್ ಬಂದ್ ಮಾಡಿ ಕುಳಿತು ಆನಂದಿಸುತ್ತೇನೆ. ಆವತ್ತು ಯಾವುದೇ ಕೆಲಸ ಮಾಡದೇ ಸುಮ್ಮನೆ ಕುಳಿತು ಕಾಲಹರಣ ಮಾಡುತ್ತೇನೆ. ಯಾರಿಗೂ ಹೇಳದೇ,ಮಾತಾಡದೇ ಸುಮ್ಮನೆ ಕುಳಿತಿರುವದಷ್ಟೇ ನಾ ಮಾಡುವ ಕೆಲ್ಸ. I recharge myself by this!

ಖಾಲಿತನ(Emptiness) ಎಲ್ಲರಿಗು ದಕ್ಕುವದಿಲ್ಲ,ಅದು ಹಾಗೇ.ಕೆಲವರಿಗೆ ಸುಮ್ಮನೆ ಕೂತಲ್ಲಿ ಕೂಡಲಿಕ್ಕಾಗುವದಿಲ್ಲ, ನಿಂತಲ್ಲಿ ನಿಲ್ಲಲ್ಲಿಕ್ಕಾಗುವದಿಲ್ಲ,ಒಂದು ತರ ಓಡುತ್ತಲೇ ಇರುತ್ತಾರೆ, ಕೊನೆಯವರೆಗೂ.
ಖಾಲಿಯಾಗಿ ಇರಬೇಕೆನಿಸುತ್ತದೆ, ಅದಕೊಂದು ಏಕಾಂತ ಬೇಕು ನನಗೆ, ಎಲ್ಲಾ ಮಾಡುವದು ಏಕಾಂತಕ್ಕಾಗಿ!! ಯಾರ್ಗೂ ಹೇಳದ ಗುಟ್ಟು, ಓದ್ತಿರೋ ನೀವುಗಳು ಯಾರ್ಗು ಹೇಳೊದಿಲ್ಲಾಂತ ಅಂದುಕೊಂಡಿದೀನಿ.

ಸೋಮವಾರ

ಆಯ್ಕೆ

ಅಕೆಗೆ ಆಯ್ಕೆಯೆಂದರೆ ಏನೆಂಬುದೇ ಗೊತ್ತಿರಲಿಲ್ಲ.ಹೆಸರಿಲ್ಲದವರೂ ಇರಬಹುದೇನೋ, ಅದರೆ ಅಯ್ಕೆಯಿಲ್ಲದವರು? ಪ್ರಪಂಚ ವಿಶಾಲವಾದುದಲ್ಲ ಇದ್ದರು ಇರಬಹುದಲ್ಲಾ? ಆಂತರ್ಯ ಹೊಕ್ಕಿ ನೋಡಿದವರಾರು?
ಅಂತಹ ಅವಳು ಇಂದು ಒಂದು ಅಮೇರಿಕನ್ ಡೈಮಂಡ ನ ಕಿವಿಯೋಲೆ ಕೊಂಡಿದ್ದಳು. ಆ ಬಂಗಾರದ ಅಂಗಡಿಯಲ್ಲಿ ಅವ ಕೊಟ್ಟ ಕನ್ನಡಿ ಹಿಡಿದು ಕೈಯಲ್ಲಿ ಕಿವಿಯೋಲೆ ಹಿಡಿದು ಮತ್ತೆ ಮತ್ತೆ ಕಿವಿಗಿಟ್ಟು ನೋಡಿಕೊಳ್ಳುತ್ತಿದ್ದಳು. ಆ ಓಲೆಯ ಹರಳಿಗೆ ಸವರಿ ಮತ್ತೆ ಹಿಂದಿರುಗಿದ್ದ ಆ ಬೆಳ್ಳನೆಯ ಬೆಳಕಿಂದ ಆಕೆಯ ಕಣ್ಣು ಹೊಳೆವ ವಜ್ರವಾಗಿತ್ತು ಎಂದರೆ ಅತಿಶಯೋಕ್ತಿಯೇನಿಲ್ಲ.

ಮನೆ ದೊಡ್ಡದಿತ್ತು, ಮನೆ ತುಂಬ ಜನರಿದ್ದರು, ಉಡಲಿಕ್ಕೆ, ಉಣ್ಣಲಿಕ್ಕೆ ಬೇಕಿದ್ದದೆಲ್ಲ ಅಲ್ಲಿತ್ತು.ಆದರೆ ಅಲ್ಯಾರಿಗೂ ದೊಡ್ಡ ಮನಸಿರಲಿಲ್ಲ.ಮಾತಡಲಿಕ್ಕೆ ಜನರಿರಲಿಲ್ಲ.ಹೊಟ್ಟೆತುಂಬ ಉಂಡಿರಲಿಲ್ಲ ಆಕೆ, ಮೆತ್ತನೆಯ ಹಾಸಿಗೆಯಮೇಲೆ ತಲೆ ಇಟ್ಟರು ಕಣ್ತುಂಬ ನಿದ್ದೆ ಇರಲಿಲ್ಲ. ಆಕೆಗೆ ಎಲ್ಲದಕ್ಕೂ ತಲೆ ಆಡಿಸಿ ಗೊತ್ತಿತ್ತೇ ವಿನಃ, ತಲೆ ಎತ್ತಿ ನಡೆದು ಗೊತ್ತೇ ಇರಲಿಲ್ಲ

ಆಕೆ ಇಂದು ಕುಶಿಯಿಂದ ಇದ್ದಾಳೆ, ಬಾಯಿತುಂಬ ನಗುತ್ತಿದ್ದಾಳೆ ಮನಸಿಂದ..

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...