ಸೋಮವಾರ

ನಾವು ಎಲ್ಲೋ ಕಳೆದು ಹೋಗ್ತೀವ?


When finally ,we reached the place,

We hardly knew why we were there

The trip had darkened every face..


'ಅಂತೂ ಇಂತೂ ನಮ್ಮ ಗುರಿ ತಲುಪಿದಾಗ,ನಮ್ಮ ಪ್ರಾಜೆಕ್ಟ್ ,ಯೋಜನೆ ಅಂತಹ ಮಹತ್ತರವಾದುದನ್ನೇನು ಸಾಧಿಸಿಲ್ಲ ಎಂಬುದು ಅರಿವಿಗೆ ಬಂದು ಎಲ್ಲರ ಮುಖ ಕಳೆಗುಂದಿರುತ್ತದೆ '.

ಹೀಗೂ ಆಗುತ್ತದಲ್ಲ? ಏನೇನೋ ಪ್ಲಾನು ,ಏನೇನೋ ಉಪಾಯಗಳು ,....ಜೀವನದಲ್ಲಿ ಬೊಗಸೇ ತುಂಬಾ ಕತೆಗಳು ,ವಿಪರೀತ ಎನ್ನುವಸ್ಟು ಮಾತುಗಳು ,ಅಣ್ಣ, ತಮ್ಮ ,ಅಮ್ಮ ಅಪ್ಪನೆಂಬ ಹಲವಾರು ಸಂಬಂಧಗಳು , ನಾನೆಂಬ ಮಾಯೆ,ನಿನ್ನೆಯೆಂಬ ಕನಸು ,ನಾಳೆ ಎಂಬ ಸಚಿತ್ರ ,ನನ್ನದೆಂಬ ಮೋಹ, ಇದು ನನ್ನದಾಗಬೇಕು,ಈಸಾರೇ ಇಷ್ಟೇ % ಮೋಸಮಾಡಬೇಕು ಎಂಬ ದೊಡ್ಡವರ (!?)ವ್ಯವಹಾರಿಕ ನಿಯತ್ತು . ಇಂತಃ ಎಲ್ಲವುಗಳ ಮಧ್ಯ ಬದುಕುತ್ತಾ, ನಲಿಯುತ್ತಾ, (ನಮ್ಮ ಕರ್ಮಕ್ಕೆ ಕೆಲವೊಂದು ಸಾರೇ ಅದನ್ನು ಒಗ್ಗಿಸಿಕೊಳ್ಳುತ್ತ ) ? ಬ್ಲೋಗೆ ಗೆ ಒಂದು ಹೊಸ ಫೋಟೋ ಹಾಕ್ತಾ  (ಪ್ರೊಫೈಲ್ ಗೆ ಒಂದು ಫೋಟೋ ಹಾಕುವದು ನೀವು ಬದುಕಿದ್ದೀರಿ ಎಂಬುದಕ್ಕೆ ಒಂದು ಪ್ರೂಫ್ , ಬ್ಲೋಗ್ ನಂತಹ ಸೋಶಿಯಲ್ ನೆಟ್‌ವರ್ಕಿಂಗ್ ಟೂಲ್ ಗೆ ಮಾತ್ರ ಇದು ಅಪ್ಲಿಕಬಲ್, ಕಾರಣ ಏನಪ್ಪಾ ಅಂದ್ರೆ ಬ್ಲೋಗ್ ಒಂದು ಸೋಶಿಯಲ್ ನೆಟ್ವರ್ಕಿಂಗ್ ಟೂಲ್ ಆಗಿರೋದಕ್ಕೆ ಬ್ಲೋಗ್ ಬರೆಯೋರು ಎಲ್ಲರ ಮುಖವನ್ನ ನೋಡಿರೋದಿಲ್ಲ ,ನಿಜವಾದವರ ,ಇಲ್ಲವ ಎನ್ನುವ ಬಗ್ಗೆ ಒಂದು ಚಿಕ್ಕ ಕ್ಲೂ ಸಿಗಬಹುದು . Cyber ಕ್ರೈಮ್ ನ ತಡೆಗಟ್ಟುವಲ್ಲಿ ಕೊಂಚ ಉಪಯುಕ್ತ ಅಲ್ವಾ?  ಬಾಯೀ ತುಂಬಾ ನಕ್ಕು, ನಿನ್ನ ಯೋಗ್ಯತೆ ಇಷ್ಟೇ ಎಂದು ಹೇಳಿ ಬೈ ಎಂದರೆ .. ನಮಗಾಗಿ ಕಾಯೋಕೆ ನಮ್ಮ ಗುರಿ ಇದೆಯಲ್ಲಾ..we should reach our Aim alva? Han . ಹಾಂ Aim ಅನ್ನೋದಕ್ಕಿಂತ The Ultimate ಎನ್ನುವ ಶಬ್ಧ ಬಹಳ ಸೂಕ್ತ ಎನ್ನಿಸುತ್ತೆ The ultimate is nothing but Fact,Truth,Reality..! ನಾನೇನು ಮುಕ್ತಿಯ ಬಗ್ಗೆ ಮಾತನಾಡುತ್ತಿಲ್ಲ.. ಸತ್ಯ,ವಾಸ್ತವದ ಬಗ್ಗೆ ..ಸತ್ಯ ,ಮಿಥ್ಯ ಎಲ್ಲವೂ ಯಾರು ಹೇಳ್ತಾರೆ ಎನ್ನುವದರ ಮೇಲೆ ಮೇಲೆ ಡಿಪೆಂಡ್ ಆಗಿರುತ್ತೆ............ ಇವೆಲ್ಲವನ್ನ ಮೀರಿ ಬೆಳೆಯೋ ಹೊತ್ತಿಗೆ ನಾವು ಎಲ್ಲೋ ಕಳೆದು ಹೋಗ್ತೀವ?.......... ಮಾಡೋ ಕೆಲಸಾನ enjoy ಮಾಡಬೇಕು ,ಇಲ್ಲಾಂದ್ರೆ ಇಷ್ಟ ಇಲ್ದೇ ಇರೋದನ್ನ ಆನಂದಿಸುವ ಅಥ್ವಾ ಹಾಗಂತ ನಟಿಸುವ ಭರದಲ್ಲಿ –‘ಲೇ ,ನೀನ್ಯಾಕೆ ಹಿಂಗಾದೆ ? ‘ ಅಂತ ನಮ್ಮನ್ನ ನಾವು ಕೇಳುವ stage ಬರುತ್ತದಾ? ನಿಮಗೂ ಹೀಗೆ ಫೀಲ್ ಆಗಿರಬೇಕಲ್ಲ? ನಮ್ಮನ್ನ ನಾವು Prepare ಮಾಡೋ ಅಗತ್ಯ ಇದೆ..

ಮೇಲಿನ ಪದ್ಯದ ಸಾಲುಗಳನ್ನ Nissim Ezekiel ಎಂಬ ‘finest’ Anglo- Indian ಕವಿಯ Enterprise ಎಂಬ ಪದ್ಯದಿಂದ ಆಯ್ದಿದ್ದೇನೆ.. Do you Prepare for realities? ಯಾವುದೇ ಪ್ರಾಜೆಕ್ಟ್ ನ್ನ ಶುರು ಮಾಡುವ ಮುಂಚೆ ನಮ್ಮನ್ನು ನಾವು ಕೇಳಿಕೊಳ್ಳ ಬೇಕಾದ ಪ್ರಶ್ನೆ ಇದು..

ಮುಂದಿನ ಒಂದು ವರುಷಕ್ಕೆ ಸರಿಯಾಗುವ ಪ್ರಾಜೆಕ್ಟ್ ಗಳಿದ್ದಾವೆ ನನ್ನ ಕೈಯಲ್ಲಿ , ಒಂದಿಷ್ಟು ಜಾಸ್ತಿ ಓದು ,ಒಂದು ಚೂರು ಬರಿಯೊದು...ಮಧ್ಯ wakeup call ಕೊಡೋ Exam ಗಳು ಸ್ನೇಹಿತರೊಬ್ಬರಿಗೆ ಕಮರ್ಶಿಯಲ್ website, ಪ್ರಶಾಂತ ಅಣ್ಣ ಗೆ ಎಂದು ಒಂದು ಫೋಟೋ ವೆಬ್ ಸೈಟ್ ಜೊತೆಗೆ ಆಫೀಸ್ ನ ಕೆಲಸ, ಸಂಭ್ರಮಿಸಲು ಮನೆ ಇತ್ಯಾದಿ ಇತ್ಯಾದಿ….


ಬುಧವಾರ

 ಆದ್ರೂ ಬರೀಬೇಕು ಅನ್ನಿಸುತ್ತೆ ....

ಅಪ್ಪಾ...ನಾನು ಒಂದು ಬ್ಲೋಗ್ ಬರೆದಿದೆನೇ......

ಓಕೇ...ಯಾವ ವಿಷಯ? ....

ಗುಬ್ಬಚ್ಚಿ ಗೂಡಿನಲ್ಲಿ.... !


ಮಾಡೋಕೆ ಕೆಲ್ಸಾ ಇರ್ಲಿಲ್ವಾ?...

ಇತ್ತು ಅಪ್ಪ..

ಕಾಕ- ಗುಬ್ಬಚ್ಚಿ ಕತೆ ಬರ್ಯೋಕಾ ನೀನು ಬ್ಲೋಗ್ ಬರೆದಿರೋದು?

ಇಲ್ಲಪ್ಪ ,,,,ಅದ್ರಲ್ಲಿ ಗುಬ್ಬಿ ಅಳಿವಿನಂಚಲ್ಲಿ ಇದೆ ಎನ್ನೋ ಸಂದೇಶ ಇದೆ...

ನೀನು ಕೊಟ್ಟಿರೋ ಹೆಸರೇ ಹೇಳುತ್ತೆ ಅದು ಕಾಕ ಗುಬ್ಬಚ್ಚಿ ಕತೆ ಎಂದು .....

ಅಪ್ಪ ಒಂದು ಸಾರೇ ಓದಿ ನೋಡಪ್ಪ...ನನ್ನ ಸ್ನೇಹಿತರೆಲ್ಲಾ ಚೆನ್ನಾಗಿದೆ ಅಂತ ಹೇಳಿದಾರೆ....
ನೀನು ಒಂದೇ ಸಾರಿ ಓದಿ ನೋಡಪ್ಪ....ಪ್ಲೀಸ್ ..ಪ್ಲೀಸ್....

ಇಲ್ಲ ಪುಟ್ಟ.. ನೀನು ಯಾವಾಗ ಪ್ರಭುದ್ಧ ವಾಗಿ ,ನಿರರ್ಗಳವಾಗಿ ಬರೆಯುತ್ತೀಯೋ...ಅವತ್ತೇ ನಾನು ಓದೋದು .....
 

ಬರೆಯುದು ಅಂದ್ರೆ ಏನು ಎಂಬುದನ್ನ ಮೊದಲು ಕಲಿತುಕೊ ಪುಟ್ಟ...ಆಮೇಲೆ ಯಾಕೆ ಬರೀತೀನಿ ಅಂತ ಯೋಚ್ನೆ ಮಾಡು ... ನೀನು ಓದಿದ ಯಾವ ಪುಸ್ತಕವನ್ನಾದರೂ ತೆಗೆದುಕೊ ....ಅದರ ಸಾರಾಂಶವನ್ನಒಂದೆಡೆ ಕುಳಿತು ಬರೆದಿಡು ...ಮತ್ತೆ ಅದನ್ನ ನಾಳೆ ಓದು ,,ನಿನಗೆ ಗೊತ್ತಾಗುತ್ತದಲ್ಲ ಅದರ ಕ್ವಾಲಿಟೀ ಯ ಬಗ್ಗೆ.........ನಿನಗೆ ನೀನೆ ವಿಮರ್ಶಕ ನಾಗುವದನ್ನ ಕಲಿ...

ಕಥೆಯನ್ನ,ಲೇಖನವನ್ನ ಪಕ್ಕದಲ್ಲೇ ಆಗುತ್ತಿದೆಯೇನೋ ಅನ್ನೋ ತರ ಬರೀಬೇಕು ಮಗಳೆ.....Reader should feel it....
ಸರೀಪ್ಪ... ..
 
ಸ್ನೇಹಿತರೆ, ಇದು ನನ್ನ ಖಾಸ್ ಭಾತ್..
 
ಅಪ್ಪ ನನ್ನ ಬೆಸ್ಟ್ ಫ್ರೆಂಡ್,ಗೈಡ್ ಫಿಲಾಸಫರ್ ..........ನನ್ನ ಅಪ್ಪ ಇನ್ನೂ ನನ್ನ ಬ್ಲೊಗನ್ನ್ ಓದಿಯೆ ಇಲ್ಲ..................ಅವರು ಎಕ್ಸ್‌ಪೆಕ್ಟ್ ಮಾಡಿದ ಬರಹ ನಾನು ಯಾವಾಗ ಬರೆಯುತ್ತೇನೋ ,ಬರೆಯದೇ ಇರುತ್ತೇನೋ ಗೊತ್ತಿಲ್ಲ...............ಅಂತಹ ಒಂದು ಒಳ್ಳೆಯ ಬರಹ ಬರೆದು ಅವರಿಗೆ ಒಂದು ಸಾರೇ ಓದಿಸ ಬೇಕು
 
ಅಪ್ಪನ ಹತ್ತಿರ ಮತ್ತೆ ಬ್ಲೋಗ್ ಬಗ್ಗೆ ಮತಾಡಿಲ್ಲ.........
 
ಬರೆದಿರೋದನ್ನ  ಎಡಿಟ್ ಮಾಡೋ ಹವ್ಯಾಸ ಇಲ್ಲ... ಡೈರೆಕ್ಟ್ ಆಗಿ ಬರೆದು ಹಂಗೆ ಪೋಸ್ಟ್ ಮಾಡೋ ಹೊತ್ತಿಗೆ ನನ್ನ ಲಂಚ್ ಬ್ರೇಕ್ ಮುಗಿದು ಹೋಗುತ್ತೆ.......ನನ್ನ ಮೌಸು ,ಟಕ ಟಕ ಎನ್ನುವ ಕೀ ಬೋರ್ಡು ,ದಿನದ ಕೊನೇ ಒಳಗೆ ಮುಗಿಸೆನ್ನುವ  ಈ ಮೈಲು ಗಳು ಜೊತೆಗೆ ಒಂದು ಟನ್ ಕೆಲಸ , ಕೀ ಕೀ ಎಂದು ಅರಚುತ್ತಿರುವ ಪಿಬಿಯೆಕ್ಸ್,,.............ಜೊತೆಗೆ ನಾನು ಓದುತ್ತಿರುವ ಎಂ ಎಸ್ ನ ಪರೀಕ್ಷೆಗಳು ......ಸಂಜೆಯಾಯಿತೆಂದರೆ ಹೊಟ್ಟೆಗೆ ಬೇಕಲ್ಲ ಎಂದು ಮಾಡುವ ಹದವಿಲ್ಲದಅಡುಗೆ......ಎಲ್ಲವೂ ನಾನು ಒಂದೆಡೆ ಕುಳಿತು ಬ್ಲೋಗ ಬರೆಯುವದಕ್ಕೆ ಅಡ್ಡಿ ಯಾಗಿವೆ...
ಆದ್ರೂ ಬರೀಬೇಕು ಅನ್ನಿಸುತ್ತೆ ....
ನೋಡೋಣ ಎಸ್ಟು ದಿನ ಹೀಗೆ ಸಾಗುತ್ತದೆ ಎಂದು ....

ಶುಕ್ರವಾರ

[This poem was nominated by UN as the best poem Written by an African Kid]

ನಾನು ಚಿಕ್ಕ ಮಗುವಿನ ಭಾವನೆಯನ್ನ ಅನುವಾದ ಮಾಡಿದ್ದೇನಷ್ಟೇ.
-ಶ್ವೇತಾ



ಯೋಚಿಸಿ ..

ಅಪ್ಪ ಅಮ್ಮ ನ ಪ್ರೀತಿಯ ಮಗಳಾಗಿ ಹುಟ್ಟುವಾಗಲೂ ಕಪ್ಪಗಿದ್ದೆ.

ಅಮ್ಮನ ಕೈ ತುತ್ತು ತಿಂದು ದೊಡ್ಡವನಾಗಿ ಬೆಳೆದಂತೆಲ್ಲ ಕಪ್ಪಗೆ ಇದ್ದೆ

ಬೆಳ್ಳಗಿನ ಸೂರ್ಯನ ಮೈ ಸುಡುವ ಬಿಸಿಲಿನಲ್ಲಿ ನಡೆದಾಗಲು ಕಪ್ಪಗೆ ಇದ್ದೇ..

ಪುಟ್ಟ ಹೃದಯ ದಭ್ ಡಬ್ ಎಂದು ಹೊಡೆದುಕೊಂಡು ಭೀತನಾಗಿ  ನಡುಗಿದಾಗಲು ಕಪ್ಪಗೆ

ಸೌಖ್ಯವಿಲ್ಲದೇ ಒದ್ದಾಡುವಾಗಲೂ ನಾ ಕಪ್ಪಗೇ ಇದ್ದಿದ್ದೆ..

ಹಮ್‍ಮ್ ..  ಇನ್ನು ನಾನು ಸತ್ತು ಮಣ್ಣಲ್ಲಿ ಮಣ್ಣಾಗುವಾಗ ಆಗಲೂ ಕಪ್ಪು.

ಆದರೆ, ನೀವು ಬಿಳಿಯ ಸಜ್ಜನರು .....


ಹುಟ್ಟಿದಾಗ ಗುಲಾಬಿ ,

ಬೆಳೆದಂತೆಲ್ಲ ಬೆಳ್ಳಗೆ ,ಸೂರ್ಯನ ಬಿಸಿಲಲ್ಲಿ ಕೆಂಪಗೆ ,

ಭಯಭೀತನಾದಾಗ ಬಣ್ಣ ಗೆಟ್ಟ ಹಳದಿ ,

ಹೆಚ್ಚು ತಂಪಾದರೆ ನೀಲಿ , ಅಪ್ಪಿತಪ್ಪಿ ಹಸಿರು ಅನಾರೋಗ್ಯದಿಂದ ,

ಮಣ್ಣಲ್ಲಿ ಮಣ್ಣಾಗುವಾಗ?
 
ನೀವು ಬೂದು ...


ಹೀಗಿದ್ದಾಗಲು ,ನೀವು ನನ್ನನ್ನು ಕರೆಯುವದು ವರ್ಣೀಯನೆಂದೆ?

ಗುರುವಾರ

ಮೂಡಿಗೆರೆಯ ವಿಸ್ಮಯ!

ಆಗೆಲ್ಲ ನನಗೆ ೧೨-೧೩ ವರುಷಗಳು .ಆಗೆಲ್ಲ ನಮ್ಮ ಮನೆಗೆ ಹಳೆಯ ಪೇಪರ್ ಗಳನ್ನು (ರದ್ದಿ ಪೇಪರ್ )ಕೊಳ್ಳಲು 'ಕಾಫಿ ಸಾಬಣ್ಣ ' ಬರುತ್ತಿದ್ದ..ದೂರದ ದಕ್ಷಿಣ ಕನ್ನಡದಿಂದ ಇಲ್ಲಿಗೆ ಬಂದು ಕಾಫಿ ಬೀಜಗಳನ್ನು ಮಾರಿ ಇಲ್ಲಿಂದ ಹಳೆಯ ಪೇಪರ್ ಗಳನ್ನು ಒಟ್ಟುಗೂಡಿಸಿ ಒಯ್ಯುತ್ತಿದ್ದ.ಸುತ್ತಲಿನ ಮನೆಗಳಿಗೆಲ್ಲ ಹೋಗುವ ಮುಂಚೆ ಬರುತ್ತಿದ್ದುದೇ ನಮ್ಮಮನೆಗೆ.

ನನಗೆ ಆತನ ನೆನಪಾದಾಗಲೆಲ್ಲ ರವೀಂದ್ರರ 'ಕಾಬೂಲಿವಾಲ' ನೆನಪಿಗೆ ಬರುತ್ತಾನೆ .ನಮ್ಮ ಮನೆಯ ಮಕ್ಕಳೆಲ್ಲ ಸಾಬಣ್ಣ ಬರುತ್ತಾನೆ ಅಂದ್ರೆ ಸಾಕು ಅಂದು ಆಟ ಪಾಟಗಳೆಲ್ಲ ಬಂದು .ಆತ ಬರುತ್ತಿದ್ದುದೇ ವರ್ಷಕ್ಕೆರಡು ಸಾರೆ. ಬಂದೆ ಇಲ್ವಲ್ಲೋ ಸಾಬಣ್ಣ ಅಂದರೆ 'ಹಾದಿ ಕರ್ಚು ಹುಟ್ಟಬೇಕಲ್ಲ ಕೂಸೇ 'ಎಂದು ಸುಮ್ಮನಾಗುತ್ತಿದ್ದ..ಆತ ನಮಗೆ ಹೇಳುತ್ತಿದ್ದುದೆಲ್ಲ ಪೂರ್ಣ ಚಂದ್ರ ತೇಜಸ್ವಿಯವರ ಕತೆಗಳು.ಆತ ಅವರ ತೋಟಕ್ಕೆ ಕಾಫಿ ಬೀಜಕ್ಕಾಗಿ ಹೋಗುತ್ತಿದ್ದ .
ಮೀನು ಹಿಡಿಯುತ್ತ ಕೂತಿರುತ್ತಿದ್ದ ತೇಜಸ್ವಿ,ಹಾರುವ ಹಕ್ಕಿಗಾಗಿ ತಾಸುಗಟ್ಟಲೆ ಕುಳಿತು ಕಾದು ಪೋಟೋ ತೆಗೆಯುತ್ತಿದ್ದ ತೇಜಸ್ವಿ ,ನಮ್ಮ ಮನೆಯ ಮಕ್ಕಳಿಗೆಲ್ಲ ತೇಜಸ್ವಿ ಬಹು ಪರಿಚಿತರು .ಚಿರತೆ ಎಂದರೆ ಜಿಮ್ ಕಾರ್ಬೆಟ್ ,ಮಚಾನು , ಚಂದ್ರ ,ನಡೆಯುತ್ತಿದ್ದರೆ ನಿಮ್ಮನ್ನು ಹುದುಗಿಸಿಕೊಳ್ಳುವ ಮಾಯಾ ಮರಳು ,ಹಾರುವ ತಟ್ಟೆಗಳು ...,ಒಟ್ಟಾರೆ ಜಗತ್ತನ್ನು ನಾವು ನೋಡಿದ್ದೇ ತೇಜಸ್ವಿಯವರ ಕಣ್ಣುಗಳ ಮೂಲಕ. ಸಾಬಣ್ಣ ಹೇಳುತ್ತಿದ್ದ ಕತೆಗಳಲ್ಲಿನ ಕೈಗೆಲ್ಲ ಕಪ್ಪು ತಾಗಿಸಿಕೊಳ್ಳುತ್ತ ಮಿಕ್ಸರ್ ,ಗಾಡಿ ಗಳ ರೆಪೇರಿ ಮಾಡುತ್ತಿದ್ದ ,ಕಂಪ್ಯೂಟರ್ ಮುಂದೆ ಕುಳಿತು ಕನ್ನಡ ಸಾಫ್ಟವೇರ್ ಬಗ್ಗೆ ಹೋರಾಡುತ್ತಿದ್ದತೇಜಸ್ವಿ ,ಕಾಫಿ ಬೆಳೆಗಾರರಿಗಾಗಿ ಧ್ವನಿಯೆತ್ತಿದ್ದ ತೇಜಸ್ವಿ .....ಅವರ ಪ್ರೀತಿಯ ಕಾಫಿ ತೋಟ ,ನಾಯಿ ಎಲ್ಲ ಕತೆಗಳನ್ನ ನಮಗೆ ಸಾಬಣ್ಣ ಹೇಳುತ್ತಿದ್ದ. ಈ ಎಲ್ಲವುಗಳಿಂದ ತೇಜಸ್ವಿ ಒಂದು ವ್ಯಕ್ತಿಯಸ್ಟೇ ಆಗಿರದೇ ಶಕ್ತಿಯಾಗಿ ಕಂಡಿದ್ದರು .ವ್ಯಕ್ತಿ ಶಕ್ತಿ ಆಗುವದು ನಿಜಜೀವನದಲ್ಲಿ ಬಹು ಕಠಿಣ .

ಇಂದಿನ ಹಾಗೆ ಏಪ್ರಿಲ್ ತಿಂಗಳು .ನನ್ನ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದೆ...ನ್ಯೂಸ್ ನೋಡುತ್ತಿದ್ದ ಅಪ್ಪ ಬಂದು ತೇಜಸ್ವಿಯವರು ಮರಣಿಸಿದ ವಾರ್ತೆ ತಿಳಿಸಿದಾಗ ..ಓಹ್ ಇದು ಸುಳ್ಳಾಗಬಾರದೆ ಎಂದು ಮರುಗಿದ್ದೆ .Attachment With Dettachment ಎಂಬ ನಂಬಿಕೆಯಿಟ್ಟು ಯಾರನ್ನು ಅಷ್ಟಾಗಿ ಹಚ್ಚಿಕೊಳ್ಳದ ನನಗೆ ತೇಜಸ್ವಿಯವರನ್ನು ಮರೆಯಾದ ಸುದ್ದಿ ಬಹಳ ದುಃಖ ತಂದಿತ್ತು.

ಸತ್ಯ ಒಪ್ಪಿಕೊಳ್ಳ ಬೇಕಿತ್ತು ಮತ್ತು ಜೀವನ ಸಾಗಿತ್ತು .

ಆ ವಿಸ್ಮಯ ವಿಶ್ವ ,ಕಾಡುಗಳು ,ಕಾಡುತ್ತಿದ್ದವು ...ಕೃಷ್ಣೆ ಗೌಡನ ಆನೆ ,ಮಂದಣ್ಣ ನೆನಪಾಗಿದ್ದರು ,ಮಚಾನು ಹತ್ತಿ ಚಿರತೆಗಾಗಿ ಕಾಯಬೇಕು ಅನ್ನಿಸುತ್ತಿತ್ತು ,ಬಿಸಿಲುಗಾಲದಲ್ಲಿ ಪಕ್ಕದಲ್ಲೇ ಹಾರುವ ತಟ್ಟೆ ಕಂಡಹಾಗೆ ಆಗುತ್ತಿತ್ತು ...ನನ್ನ ಸ್ನೇಹಿತರಲ್ಲಿ ಹೇಳುತ್ತಿದ್ದೆ ಜೀವನದ ಕೆಲವು ಗಳಿಗೆಗಳನ್ನು ಕಾಡಿನಲ್ಲಿ ಮನೆಮಾಡಿ ಅಲ್ಲೊಂದು ಕೊಳ ಕಟ್ಟಿ ಗಾಳ ಹಾಕುತ್ತ ಮೀನು ಹಿಡಿಯುತ್ತ ಕುಳಿತಿರಬೇಕು ಎಂದು .....ಹುಚ್ಚಾ ..!ಸಮಸ್ಯೆ ಇಲ್ಲದಲ್ಲಿ ಸಮಸ್ಯೆ ಹುಟ್ಟುಹಾಕಿ ಅದನ್ನು solve ಮಾಡುವ ಹುಚ್ಚೆ ನಿಂಗೆ ಎಂದು ಸ್ನೇಹಿತರೊಬ್ಬರು ಅಣಕಿಸಿದ್ದರು....ನಾನೂ ನನ್ನ ಸ್ನೇಹಿತೆ ಸೇರಿ ರೈಟೆಯ ಎಂಬ ಕೃತಿಯನ್ನು ಚಲನ ಚಿತ್ರವಾಗಿಸಬೇಕೆಂದು ಮಾತಾಡಿಕೊಂಡಿದ್ದೆವು . ಪಂಪ ಪ್ರಶಸ್ತಿ ಬಂದಾಗ ಹತ್ತಿರದ ಬನವಾಸಿಗೆ ಬರುವರಲ್ಲ ಎಂದು ಅಲ್ಲಿಗೆ ಹೋದರೆ ತಗೆದುಕೊಳ್ಳಲು ಬರಲೇ ಇಲ್ಲ...ನೇರ ನುಡಿಯ ನಿಗೂಢ ಮನುಷ್ಯ ನಮ್ಮ ಮೆಚ್ಚಿನ ತೇಜಸ್ವಿ .

ಹತ್ತಿರದ ಮರ್ಕಡಕ್ಕೋ,ಕಾರ್ಕಳಕ್ಕೋ ಹೋದಾಗ ,ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ನೆನಪಾಗುತ್ತಿತ್ತು ,ತೇಜಸ್ವಿ ನೆನಪಪಾಗುತ್ತಿದ್ದರು ..ತಟ್ಟನೆ ಅವರಿಲ್ಲವಲ್ಲ ಎಂದು ನೆನಪಾಗುತ್ತಿತ್ತು ....ನದಿಮೂಲ ಹುಡುಕ ಹೊರಟ ಮಾಯಾಲೋಕ ,ಚಿದಂಬರ ರಹಸ್ಯ,ಜುಗಾರಿ ಕ್ರಾಸ್ ,ಓತಿಕ್ಯಾತ ದ ಹಿಂದೆ ಬಿದ್ದೆ ಕರ್ವಾಲೋ, ಮಿಲೆನಿಯಮ್ ಸಿರೀಸ್ ,ಅಣ್ಣನ ನೆನಪು ,ಪರಿಸರದ ಕತೆಗಳು ,ಹುಲಿಯೂರಿನ ಸರಹದ್ದು ,ಅಬಚೂರಿನ ಪೋಸ್ಟ್ ಆಫೀಸು ,ತಬರನ ಕತೆ ,ಕಾಡಿನ ಕತೆಗಳು ,ಗುಡುಗು ಹೇಳಿದ್ದೇನು,ರಹಸ್ಯ ವಿಶ್ವ,ನಿಗೂಢ ಮನುಷ್ಯರು ಸ್ವರೂಪ ....ಓದುತ್ತ ಓದುತ್ತ ಚಿರತೆ ಕೂಗಿದ ಹಾಗೆ ಆಗುತ್ತಿತ್ತು,ಗಯ್ಯಾಳಿಗಳು ಅಟ್ಟಿಸಿಕೊಂಡು ಬಂದ ಹಾಗೆ ಅನ್ನಿಸುತ್ತಿತ್ತು ,ಮೇಲೆ ನಡೆದರೆ ತನ್ನೊಳಗೆ ಹುದುಗಿಸಿಕೊಳ್ಳುವ ಮಾಯಾ ಮರಳಲ್ಲಿ ನಡೆದ ಹಾಗೆ ,ಮಲೆನಾಡಿನ ಅಪ್ಪಟ ಮಳೆಗಾಲದಲ್ಲಿ ಕಿಟಕಿಯ ಮುಂದೆ ಕುಳಿತು ಹಪ್ಪಳ ತಿನ್ನುತ್ತ ಕುಳಿತರೆ ವಿಶ್ವವೇ ನಿಗೂಢ ವಾಗಿ ,ನಾನೂ ನಿಗೂಢತೆಯ ಭಾಗವಾದಂತೆ ತೋರುತ್ತಿತ್ತು ....ತಿರುಗಿದಾಗ ತೇಜಸ್ವಿಯವರು ಪಕ್ಕದಲ್ಲೇ ಬಂದು ನಿಂತಂತೆ ಭಾಸವಾಗುತ್ತಿತ್ತು ,,ಆದರೆ ಅದು ಬರಿದೇ ಕೋಲ್ ಮಿಂಚು ..ಮಿಂಚುಳ್ಳಿಯಲ್ಲ ಎಂದರಿವಿಗೆ ಬಂದಾಗ ತುಸು ಸಂಕಟ ....

ಮೊನ್ನೆ ಏಪ್ರಿಲ್ ೫ ಕ್ಕೆ ಅವರಿಲ್ಲವಾಗಿ ವರ್ಷಗಳೆರಡು ಕಳೆಯುತ್ತಿದೆ ....ಅಂದೇ ಬರೆಯಬೇಕೆಂದು ಕೊಂಡಿದ್ದೆ ಆದರೆ ಕೆಲಸದ ಒತ್ತಡ ದಿಂದಾಗಿ ಬರೆಯಲಿಕ್ಕಾಗಲಿಲ್ಲ.. ಹಠಕ್ಕೆ ಬಿದ್ದು ಬರೆಯುತ್ತಿದ್ದೇನೆ ..ನನಗೆ ಗೊತ್ತು ಇಂದು ನನ್ನ ಕೆಲಸ ಹಿಂದೆ ಬೀಳುತ್ತದೆ ಎಂದು.ಆದರೆ ನಾನು ಇಸ್ಟು ಮುಂದೆ ಬರಲು ಕಾರಣರದವರಿಗಾಗಿ ಇಸ್ಟೂ ಮಾಡಲಾರೆನೆ???

ನನ್ನ ಒಂದು ನುಡಿ ನಮನ...............
ಇತ್ತೀಚಿಗೆ ಕಾಫೀ ಸಾಬಣ್ಣನೂ ಬರುತ್ತಿಲ್ಲ ,ವಯಸ್ಸಾಯಿತಲ್ಲ ..ಪರಾವಲಂಭಿ ಆಗಿದ್ದಾನಂತೆ.....ನಾವು ಮಕ್ಕಳೆಲ್ಲ ರೆಕ್ಕೆ ಕಟ್ಟಿಕೊಂಡು ಗೂಡಿನಿಂದ ಹಾರಿ ಬಂದಿದ್ದೇವೆ .... ಜೀವನ ಸಾಗುತ್ತಲಿದೆ .....

ತೇಜಸ್ವಿಯವರ ಪತ್ನಿ ರಾಜೇಶ್ವರಿ ಕೆಂಡಸಂಪಿಗೆ ಯಲ್ಲಿ ತಮ್ಮ ನೆನಪುಗಳನ್ನು ತುಂಬ ಚೆನ್ನಾಗಿ ಹಂಚಿಕೊಂಡಿದ್ದಾರೆ ....


ಸ್ನೇಹಿತರೆ,



ಇದು ನನ್ನ ಮೆಚ್ಚಿನ ಹಳೆಯದೊಂದು ಬ್ಲೋಗ್ ..ಬಹಳ ದಿನಗಳ ಹಿಂದೆ ಬರೆದಿದ್ದೆ ,ಹಲವಾರು ಕಾರಣಗಳಿಂದ ನನ್ನ ನೆನಪಲಿ ಬಹಳ ದಿನ ಉಳಿದಿದೆ ಈ ಲೇಖನ ...ಯಾಕೋ ಮತ್ತೆ ಹೊಸ ಬ್ಲೋಗ್ ಮನೆಯಲ್ಲಿ ಹಾಕಬೇಕು ಅನ್ನಿಸಿತು ,ಮತ್ತೆ ಈ ಬ್ಲೋಗಿನಲ್ಲಿ ಮಾರ್ಪಡಿಸದೆಯೇ ಹಾಕಿದ್ದೇನೆ.........ನಿಮ್ಮ ಅಭಿಪ್ರಾಯಗಳ ನಿರೀಕ್ಷೆಯಲ್ಲಿ ........

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...