ಶುಕ್ರವಾರ

ಕಷ್ಟ ನಷ್ಟ ವಿಚಾರಿಸದ ವಿಶಾಲವಾದ ಬದುಕಿದೆ!!!..

ಆಕೆ ನಗುನಗುತ್ತಾ ಮಾತನಾಡುತ್ತಾ ಳೆ ,ಬೆಳಿಗ್ಗೆ ನಾನು ಆಫೀಸ್ ಗೆ ಹೊರಡುವಾಗ ದಾರಿಯ ಬದಿಯಲ್ಲಿ ಕುಳಿತು ,ಗುಡ್ ಮಾರ್ನಿಂಗ್ ಅಕ್ಕ ಎನ್ನುತ್ತಾಳೆ, ಸಂಜೆ ಮನೆಗೆ ಬರುವಾಗ ,ಅಕ್ಕ ಇವತ್ತು ಪಪ್ಪಾಯ ಹಣ್ಣು ಸಿಹಿಯಾಗಿದೆ ,ಪಡುವಲ ಕಾಯಿ ಫ್ರೆಶ್ ಆಗಿ ಬಂದಿದೆ ಎನ್ನುತ್ತಾಳೆ,ಹಣ್ಣು ತೆಗೆದು ಕೊಳ್ಳಲು ಹೋದರೆ , ಇದು ನೋಡಿ,ಸ್ವೀಟ್ ಆಗಿದೆ ಎಂದು ೪ ದ್ರಾಕ್ಷಿ ತೆಗೆದು ಕೈಯಲ್ಲಿ ಇಡುತ್ತಾಳೆ ,ಸೇಬು ತೆಗೆದು ಕೊಳ್ಳಲು ಹೋದರೆ ,ಒಂದು ಬಾಳೆ ಹಣ್ಣು ,ಒಂದು ಕಿತ್ತಳೆ ತೆಗೆದು ನಿಮ್ಮ ಕೈಚೀಲದೊಳಕ್ಕೆ ಹಾಕುತ್ತಾಳೆ ,ಹಣ್ಣು ಸಿಹಿ ಇಲ್ಲವಾದರೆ ಈಗಲೇ ವಾಪಾಸು ತಂದುಕೊಡಿ ಅನ್ನುತ್ತಾಳೆ....ಸೇಬು ತೆಗೆದು ಕೊಳ್ಳಲು ಹೋದ ನನಗೆ ಆಕೆ ಬಾಳೆಹಣ್ಣು , ಹೀರೇಕಾಯಿ ,ಸೌತೆಕಾಯಿ ಕೊಳ್ಳು ವ ಹಾಗೆ ಮಾಡುತ್ತಾಳೆ.......

ಯಾರೀಕೆ? ಎಲ್ಲಿಂದ ಕಲಿತಳು ಕಸ್ಟಮರ್ ಸ್ಯಾಟಿಸ್ಫ್ಯಾಕ್ಶನ್ ,ಮಾರ್ಕೆಟಿಂಗ್ ಉಪಾಯಗಳ ನ್ನ ?B school ನಲ್ಲಿ ಓದಿದ್ದಾಳ ? ಐ ಟಿ ಯಲ್ಲಿ ಕೆಲಸ ಮಾಡುತ್ತಿದ್ದಾಳ, ದೇಶ ದೇಶ ತಿರುಗಿದ್ದಾಳಾ ? ,ಹೋಗಲಿ ಕೋಶ ಓದಿದ್ದಾಳಾ?? ನೋಡೋಕೆ ವಿಶ್ವ ಸುಂದರಿಯಾ?! ಇಲ್ಲಾ.!!.ಇಲ್ಲಾ....!!!

ಗ್ರಾಹಕರಿಗೆ ಸಂತೋಷ ವಾಗುವಂತೆ ಹೇಗೆ ಮಾತನಾಡಬೇಕು ,ಹೇಗೆ ಉತ್ತಮ ಕ್ವಾಲಿಟಿಯನ್ನ ಉಳಿಸಿಕೊಳ್ಳ ಬೇಕು ,ಒಮ್ಮೆ ಬಂದ ಗ್ರಾಹಕನನ್ನ ಮತ್ತೊಮ್ಮೆ ಬರುವ ಹಾಗೆ ಕೆಲಸವನ್ನ ಹೇಗೆ ಮಾಡಬೇಕು ಎಲ್ಲ ವನ್ನ ಕಲಿಯಲಿಕ್ಕೆ ವಿಶೇಷ ತರಬೇತಿಗಳಿವೆ ,ಒಳ್ಳೆಯ ವಿಡಿಯೋ ,ಆಡಿಯೋ ಗಳಿವೆ ,ಕಲಿಸಲು ಗುರುಗಳು ಇದ್ದಾರೆ (fecilitators .. ಎನ್ನಬೇಕು trainers ಅಲ್ಲ.) ನಮ್ಮಂತಾ ಸೊಫ್ಟೆeರಿಗಳಿ ಗೆ ಅದಕ್ಕೊಂದು ಟ್ರೈನಿಂಗ್ ,ಕಲಿಸೋಕೆ ಗುರುಗಳು ಇರುತ್ತಾರೆ ,


ಈಕೆಗೆ?? ......  ಯಾರೂ ಇಲ್ಲ,.

ಆದರೇ ,. ತೊಂದರೆ ಕೊಡಲು, ಪಾಠ ಹೇಳಲು ಬದುಕಿದೆ.!! ಕಷ್ಟ ನಷ್ಟ ವಿಚಾರಿಸದ ವಿಶಾಲವಾದ ಬದುಕಿದೆ.

ಕೆ ಒಬ್ಬ ಸಾಮಾನ್ಯ ಹೆಂಗಸು,ಕುಡುಕ ಗಂಡ, ೩ ಪುಟ್ಟ ಮಕ್ಕಳನ್ನ ಕಟ್ಟಿಕೊಂಡು ಹೆಣಗುತ್ತಿರುವವಳು ,
ಆದರೆ ಆಕೆಗೆ ಹಸಿವು ಗೊತ್ತು ,ಮಕ್ಕಳ ಪುಟ್ಟ ಹೊಟ್ಟೆ ತುಂಬಿಸುವ ಜವಾಬ್ದಾರಿ ಗೊತ್ತು .ಕುಡುಕ ಗಂಡನನ್ನ ಸಂಭಾಳಿಸುವ ಮನಸ್ಸು ಗೊತ್ತು .ನನ್ನ ಮನೆಯ ಪಕ್ಕದಲ್ಲಿ ತಳ್ಳುವ ಗಾಡಿಯಲ್ಲಿ ಹಣ್ಣು, ತರಕಾರಿ ಮಾರುತ್ತ ಜೀವನಸಾಗಿಸುತ್ತಿರುವವಳು.

ಆಕೆಯ ಅದ್ಭುತ ಅನ್ನಿಸುವ ಕಪಟ ಇಲ್ಲದ ವ್ಯಾಪಾರೀ ಶೈಲಿಗೆ ಖಂಡಿತವಾಗಿ ನಾನು ಮರುಳಾಗಿದ್ದೆನೆ..ವ್ಯಾಪಾರವೇ ಕಪಟತನದ್ದು ಎನ್ನಬೇಡಿ ಪ್ಲೀಸ್ .ಏಕೆಂದರೆ ಅದು ಅವರ ಹೊಟ್ಟೆ ಪಾಡು .ನಾವು ತಿನ್ನುವದ ರಲ್ಲಿ ಆಕೆಗೊಂದು ಚೂರು ಕೊಡೋಣ ಅಷ್ಟೇ...

ಹ್ಯಾಟ್ಸ್ ಓಫ್ ಅನ್ನೋಣವೇ? ಬದುಕು ಎಲ್ಲವನ್ನ ಕಲಿಸುತ್ತೆ .ವ್ಯಾಪಾರ ಎನ್ನುವದು ಒಂದು ಕಲೆ ,ಅದಕ್ಕೆ ನಿಮ್ಮ ಆಟಿಟ್ಯೂಡ್ ಒಂದೇ ಸಾಕು, ಬೇರಾವ ಕಲಿಕೆಯೂ ಬೇಡ. ಸಾಫ್ಟ್ವೇರ್ ಕಂಪನಿಯ ಒಡೆಯನಿಗೆ ಜಾವಾ ಪ್ರೋಗ್ರಾಮ್ ,ಸೀ ಪ್ರೋಗ್ರಾಮ್ ಕಲಿಯುವ ಅಗತ್ಯವಿಲ್ಲ  ,ಜನರಿಂದ ಕೆಲಸ ತೆಗೆಯುವ ಕಲೆ ಗೊತ್ತಿದ್ದರೆ ಸಾಕು .

ಈಕೆಯೊಂದು ಉದಾಹರಣೆಯಷ್ಟೇ ,ಇಂತಹ ಹಲವು ಮಹಿಳೆಯರಿದ್ದಾರೆ ,ಚಿಕ್ಕ ಪುಟ್ಟ ಗೂಡಂಗಡಿಗಳಿಂದ ತಮ್ಮ ಬದುಕು ನಿರ್ವಹಿಸುತ್ತಿದ್ದಾರೆ..ಸೂಪರ್ ಮಾರ್ಕೆಟ್ ಗಳು ಧಾಳಿ ಇಟ್ಟಾಗ ಬೀದಿ ಬದಿಯ ವ್ಯಾಪಾರಿಗಳೆಲ್ಲ ಕಂಗಾಲಾಗಿದ್ದು ಹಳೆಯ ಕತೆ .ವ್ಯವಹಾರ ಕಡಿಮೆ ಆಗಿರಬಹುದು ,ಆದರೆ ವ್ಯವಹಾರ ಪೂರ್ಣ ಮುಳುಗಿಲ್ಲ.ಎಲ್ಲ ಸೂಪರ್ ಮಾರ್ಕೆಟ್ ಗಳಿಂದ ತಮ್ಮನ್ನ ಸುರಕ್ಷಿತವಾಗಿಸಿಕೊಂಡವರಿದ್ದಾರೆ ,ಹಿಂದಿನ ಹಾಗೆ ಶೆಟ್ಟರ  ದಿನಸಿ ಅಂಗಡಿ ಇಂದಿಗೂ ನಡೆಯುತ್ತಿದೆ.

ಎಲ್ಲರಿಗೂ ನನ್ನದೊಂದು ಸಲಾಮ್!..
ಜಸ್ಟ್  ಮಾತ್  ಮಾತಲ್ಲಿ........



ನಿನ್ನೆ ಸಂಜೆ ತುಂಬಾ ತುಂಬಾ ಚೆನ್ನಾಗಿತ್ತು. ರವಿ ಬೆಳಗೆರೆ,ಕನ್ನಡದ ಸುದೀಪ್ ,ಜಸ್ಟ್ ಮಾತ್ ಮಾತಲ್ಲಿ..ಎಂದು ಹಾಡುವ ರಘು ದೀಕ್ಷಿತ್, ಜೊತೆಗೆ ಕಾರ್ಯಕ್ರಮವನ್ನು ನಿರೂಪಿಸಲು ಬಂದ 'ಎವರ್ ಗ್ರೀನ್' ಅಪರ್ಣಾ..!ಎಲ್ಲ ನಮ್ಮ ಕಂಪನೀ ಯ ಆವರಣದಲ್ಲಿ ...!

ಕಾರಣ??
 ಐ ಟಿ ಆವರಣದಲ್ಲಿ ರವೀ ,ಸುದೀಪ್,ರಘು...
ನಮ್ಮಲ್ಲೂ ಕತೆ ,ಕವನ ಬರೆಯುವ ವರಿದ್ದಾರೆ ,ಒಳ್ಳೆಯ ಲೇಖಕರಿದ್ದಾರೆ ...ವೃತ್ತಿ ಬೇರೆ ಪ್ರವೃತ್ತಿ ಬೇರೆ ಅಷ್ಟೇ....
ವಿಸ್ಮಯ ಎನ್ನುವ ಕನ್ನಡ ಹಬ್ಬ ನಮ್ಮ ಕ್ಯಾಂಪಸ್ ನಲ್ಲಿ...

ನಿಜ ಹೇಳಲೇ ಬೇಕು ಎಂದರೆ ಹೇಳುತ್ತೇನೆ ಕೇಳಿ

ನಾನು ರವಿ ಯ ಓ ಮನಸೇಯಿಂದ (ನನ್ನ ಮೊದಲ ಉದ್ದನೆಯ ಲೇಖನ ಪ್ರಕಟ ವಾಗಿದ್ದು ಓ ಮನಸೇ ನಲ್ಲಿ !) ಆಗಾಗ ಒಳ್ಳೆಯ ಲೇಖನ ಗಳನ್ನ ಹೆಕ್ಕಿ ತೆಗೆದು ಓದುತ್ತಿದ್ದೆ.  ಆದರೆ ಬಹಳ ವರುಷಗಳಿಂದ ನನ್ನ ಪ್ರೀತಿಯ 'ಸುಧಾ' ಗೆ ಆತು ಕೊಂಡು ಬಿಟ್ಟಿದ್ದೆ. ಯಾಕೋ ಗೊತ್ತಿಲ್ಲ ಇಂದಿಗೂ ಬಿಟ್ಟಿಲ್ಲ.
ಮಯೂರ ,ಪ್ರಜಾವಾಣಿ ,ಡೆಕ್ಕನ್ ಹೆರಾಲ್ಡ್ ,ಸುಧಾ ,ವರ್ಷಕ್ಕೊಂದೆ ಬರುತ್ತಿದ್ದ ವಿಶೇಷ ಸಂಚಿಕೆ ಇವೆಲ್ಲ ನನ್ನ ಕನ್ನಡ್ಕ್ಕೊಂದು ಕ್ಲ್ಯಾಸಿಕ್ ಟಚ್ ಕೊಡುವಲ್ಲಿ ತುಂಬಾ ಸಹಾಯ  ಮಾಡಿದ್ದವು..ಬಂಡ್ಲ್ ಗಟ್ಟಲೆ ಸಣ್ಣ ಕತೆಗಳನ್ನ, ಬೇರೆ ಬೇರೆ ದೇಶದ ಕತೆಗಳನ್ನ ಟಾಲ್ ಸ್ಟಾಯ್ ನಂತಹ ಮಹಾನ್ ಲೇಖಕನ Anna Kerenina,'ವಾರ್ n ಪೀಸ್' ಕೃತಿಗಳನ್ನ ,'Just Lather That's All 'ಕತೆ  ಓದಿದ್ದು ಮಯೂರ ದಲ್ಲಿ .(ಮಯೂರ ದಲ್ಲಿ ಬರುತ್ತಿದ್ದ ಕ್ಲಾಸಿಕ್ ಶೈಲಿಯ ಸಣ್ಣ ಕತೆಗಳ ಅಭಿಮಾನಿ ನಾನು) ..,ಅಮೃತ ಪ್ರೀತಂ ರಂತ ಲೇಖಕಿಯರ ( ಲೇಖಕರ) ನಿವೇದನೆಗಳನ್ನ.,ರಾಮಾಯಣ,ಮಹಾಭಾರತ, ದಂತಹವನ್ನ 'B K S ವರ್ಮ' ರ ಚಿತ್ರಗಳ ಸಮೇತ ಧಾರಾವಾಹಿಯಾಗಿ ಬಂದಿದ್ದನ್ನ ಓದಿದ್ದೆ..ನನ್ನ ಕಣ್ಮುಂದೆಯೇ ಮಹಾಭಾರತ ನಡೆಯುತ್ತಿದೆಯೇನೋ ,ನನ್ನ ಕಣ್ಮುಂದೆಯೇ ಸೀತೆಯ ಅಪಹರಣನಡೆಯಿತೇನೋ ಎನ್ನುವ ಮಟ್ಟಿಗೆ ಆ ಧಾರಾವಾಹಿಗಳು ನಮ್ಮ ಮಹಾನ್ ಕೃತಿಗಳ ದರ್ಶನ ಮಾಡಿಸಿದ್ದವು ..ಕೃಷ್ಣನ ಗೀತೋಪದೇಶ ನನ್ನ ಕಣ್ಮುಂದೆ ಇಂದಿಗೂ ಇದೆ...

  ಬನ್ನoಜೆ ಗೋವಿಂದಾಚಾರ್ಯ, ಕೃಷ್ಣ ಶಾಸ್ತ್ರಿ, ಜೊತೆಯಲ್ಲಿ ವಂಶೀ, ತುಶ್ವಿನು ,ನನ್ನ ಪಕ್ಕದ ಊರು ಸಾಗರದ ನಾಡಿಸೋಜ, ಮುಂತಾದವರೆಲ್ಲ ಜಗತ್ತು ನೋಡಲು ಶುರು ಮಾಡಿದ್ದ ನನಗೆ ಸಾತ್ ಕೊಟ್ಟಿದ್ದವು ..ನಾಡಿಸೋಜ ರಿಂದ (ಈಗರ್ಜಿಯ ಸುತ್ತಲಿನ ಹತ್ತು ಮನೆಗಳು etc) Christian ರ ಸಮಾಜದ ಆಗು ಹೋಗುಗಳ ಬಗ್ಗೆ , ಡ್ಯಾಮ್ ಕಟ್ಟಿ ಮುಳುಗಿಸಿದಾಗ ಅಲ್ಲಿನ ಜನರಿಗೆ ಬಂದೆರಗಿದ್ದ ಆಪತ್ತು ಗಳು ,ಅವರ ಜೀವದ ತುಮುಲಗಳು, ಮುಳುಗಡೆಯ ಭೀತಿ ,ಶರಾವತಿ ಹಿನ್ನೀರಿನ ಜನರ ಪಾಡು,ಕ್ಷಣ ಕ್ಷಣಕ್ಕೂ ಬದಲಾಗುವ ಅಲ್ಲಿನ ಜನರ ಕಾರ್ಪಣ್ಯಗಳು  ಇವೆಲ್ಲವನ್ನ  ಅರುಂಧತಿ ರಾಯ್ ರ 'ಗ್ರೇಟರ್ ಕಾಮನ್ ಗುಡ್ '  ಗಿಂತಲೂ ಚೆನ್ನಾಗಿ ಅರ್ಥ ಮಾಡಿಸಿದ್ದು ನಾಡಿಸೋಜ  .........ನನಗೆ ದಕ್ಷಿಣ ಕನ್ನಡ ದ ಬಂಟ್ಸ್ ಸಮಾಜ ದ ಬಗ್ಗೆ ,ಜಗತ್ತಿನ ಎಲ್ಲ ಆಗುಹೋಗುಗಳ ಬಗ್ಗೆ, ವೀರಪ್ಪನ್ ,ಕ್ರಪಾಕರ ಸೇನಾನಿ ಇವರೆಲ್ಲರನ್ನು ನನಗೆ ಪರಿಚಯಿಸಿದ್ದು 'ಸುಧಾ'.. .....ಫಾಂಟಮ್ ನಂತಹ ಎಂದು ಮುಗಿಯದ ಚಿತ್ರಕತೆಗಳು, ತಲೆ ಗೊಂಚುರು ಕಾಟ ಕೊಡುವ ಪಧಬಂಧ.,ಮಕ್ಕಳ ಪುಟಗಳು etc etc ..

ನಾನು ಓದಿದ್ದ ಮೊದಲ ಕಾದಂಬರಿ 'ದೌಲತ್' (ಆಗ ನಾನು ನಾಲ್ಕನೇಯದೋ  ,೫ದನೇಯದೋ  ತರಗತಿ ಯಲ್ಲಿದ್ದೆ.) ಇತಿಹಾಸಿಕ ಘಟನೆಗಳನ್ನ ಒಳಗೊಂಡ ಟಿಪ್ಪು,ಹೈದರಾಲಿ ಯರ ಕುರಿತಾದ ಒಳ್ಳೆಯ ಕಾದಂಬರಿ ... ಮಗುವಾಗಿ ಹಾವು ಹುಟ್ಟು ವ (ಮಹಿಳೆಯ ಹೊಟ್ಟೆಯಿಂದ ಹಾವು ತೆಗೆದದ್ದು ನಾನು ನೋಡಿದ್ದೇನೆ, ನಮ್ಮೂರಿನ ಸರಕಾರಿ ಆಸ್ಪತ್ರೆಯಲ್ಲಿ ಇನ್ನೂ ಇದೆ,ಹಾವಿನ ಮೊಟ್ಟೇ ಹೊಟ್ಟೆಯೊಳಕ್ಕೆ ಸೇರಿ.. ) ಒಂದು ರೀತಿಯ ಕತೆ, ಸಿನೆಮಾ ಜೀವನ(movie 'ಫ್ಯಾಶನ್' ಗೆ ಹೋಲುವಂತ್ ದೇ ಒಂದು ಕತೆ ಯ ಎಳೆ ) ಕಿತ್ತೂರಿನ ಚನ್ನಮ್ಮಳ ಕತೆ, ಎಲ್ಲವೂ ನಾನು ಓದಿದ್ದು ಸುಧಾ ದಲ್ಲಿ..,       ನೇಮಿಚಂದ್ರರ ಹ್ಯಾನ ,ಅನೇಕ ಥ್ರಿಲಿಂಗ್ ಅನ್ನಿಸುವ ಪತ್ತೇದಾರಿ ಕತೆಗಳು (ಗುಪ್ತಚರ ವಿಭಾಗಕ್ಕೆ ಸಂಬಂಧಿಸಿದ್ದು ),ಡಬ್ಲ್ ಕ್ರಾಸ್ ಎನ್ನುವ ಶಬ್ಧ ಪರಿಚಯ ವಾಗಿದ್ದೆ ಅಲ್ಲಿಂದ..
ಈಗ ಕೆ ಎನ್ ಗಣೇಶಯ್ಯ.. ಇತ್ತೀಚೆಗೆ ಬರುತ್ತಿರುವ ಕೆ ಎನ್ ಗಣೇಶಯ್ಯನವರ ಇತಿಹಾಸಿಕ, ತಾರ್ಕಿಕ ಕಾದಂಬರಿಗಳು ....ವಾವ್ ...ನಿಜಕ್ಕೂ ನನಗೆ ಸ್ವಾಮಿ ವೆಂಕಟೇಶ್ವರನಲ್ಲಿ ಬುದ್ಧಕಾಣುತ್ತಿದ್ದಾನೆ..
ಅದ್ಭುತ ಎನ್ನಬಹುದಾದ ಕ್ಲಾಸಿಕ್ ಗಳು ಅವು ..ನಿಜಕ್ಕೂ ಅಲ್ಲಿನ ತರ್ಕಗಳು ನಮ್ಮ ಧೀ ಶಕ್ತಿಗೆ ಒಳ್ಳೆಯ ಕಸರತ್ತು ಕೊಡುತ್ತಿದೆ..ಥ್ಯಾಂಕ್ ಯೂ ಗಣೇಶಯ್ಯನವರೇ..

ಓಹ್ ತುಂಬಾ ಸುದ್ದಿ ಹೇಳಿಬಿಟ್ಟೆ ಅಲ್ಲವ?.............'ಓ ಮನಸೆಯನ್ನ' ನೆನಪು ಮಾಡಿಕೊಂಡಾಗ ಇವೆಲ್ಲ ನನ್ನ ಮನದಲ್ಲಿ ಹಾಗೆ ತೇಲಿ ಬಂದಿದ್ದು  ಸುಳ್ಳಲ್ಲ.

ನಾನು, ಪಾಚು ಪ್ರಪಂಚ ಬ್ಲೋಗಿನ ಪಾಚು ಅಣ್ಣ , ಮಲೆನಾದ ಕರಾವಳಿ ಬ್ಲೋಗಿನ ಭಟ್ಟ, ಹುಡುಕಾಟದ ಯಜ್ಞೇಶ್ ಮತ್ತು ಹಲವಾರು ಸೇರಿ ಒಂದೆಡೆ ಕುಳಿತು ವಿಸ್ಮಯ ಕಾರ್ಯ ಕ್ರಮ ನೋಡಿದ್ದು ಒಂದು ವಿಶೇಷ..ಕನ್ನಡ ದ ಒಳ್ಳೆಯ ನಟ 'ಸುದೀಪ್' ತುಂಬಾ ಚೆನ್ನಾಗಿ ಹಾಡು ಹೇಳಿ ,ಚಿಂತನಾಶೀಲ, ಸಮಯೋಚಿತ ಮಾತುಗಳನ್ನು ಆಡಿದ್ದರು.. ನಾನು ಕೇವಲ ೧.೫ ಘಂಟೆ ಮಾತ್ರ ಇದ್ದೇ.. ಮೀಟಿಂಗ್ ಮಿಸ್ ಮಾಡುವಂತೆ ಇರಲಿಲ್ಲ ,ಸುದೀಪ್,ರವೀ ಎದ್ದು ಹೊರಟ ಮೇಲೆ ನನ್ನ ಡೆಸ್ಕ್ ಗೆ ಬಂದು  'ಜಸ್ಟ್ ಮಾತ್ ಮಾತಲ್ಲಿ' ಎಂದು ಹಾಡಿಕೊಳ್ಳುತ್ತ ಮತ್ತೆ ಕೆಲಸ ಶುರು ಮಾಡಿಕೊಂಡೆ....

ಚಿತ್ರ ಕೃಪೆ;ಅಂತರ್ಜಾಲ

ಗುಬ್ಬಚ್ಚಿ ಗೂಡಿನಲ್ಲಿ ಕಣ್ಣು ಮುಚ್ಚಿ ..........


(pic-internet )
ಒಂದು ಊರಲ್ಲಿ ಒಂದು ಗುಬ್ಬಚ್ಚಿ ಇತ್ತಡ ,ಅದಕ್ಕೆ ಚಿಕ್ಕ ರೆಕ್ಕೆ ,ರೆಕ್ಕೆ ಮೇಲೆಲ್ಲಾ ಕಪ್ಪು ಬಣ್ಣದ ಗೆರೆಗಳು ...ನೀನು ಟೀವಿನಲ್ಲಿ ನೋಡಿದ್ಯಲ್ಲ ಮೊನ್ನೆ ಹಂಗೆ ಇರುತ್ತೆ ಕಂದಾ. ಈಗ ಆ ಅನ್ನು.. ಜಾಣ ಅಲ್ಲಾ ನೀನು ..ಸ್ವಲ್ಪ ತಿಂದು ಬಿಡು ...ದೋಸೆನಾ.....ಅಮ್ಮಾ, ನಂಗು ತೋಚು ಗುಬ್ಬಿನಾ ....ನಾಳೆ ಟೀವಿನಲ್ಲಿ ತೊರ್ಸ್ತಿನೋ ಪ್ಲೀಸ್.. ಇದು ಲಾಸ್ಟ್ ಬೈಟ್ ,ತಿನ್ನು ಜಾಣ ಮರಿ ನೀನು ....ಅಕ್ಕ, ಪುಟ್ಟ ಮಗನಿಗೆ ದೋಸೆ ತಿನ್ನಿಸಲು ಮಾಡಿದ ಸರ್ಕಸ್ಸು ನೋಡಿ ನಗು ಬರುತ್ತಿತ್ತು.


ನಾವೆಲ್ಲಾ ಚಿಕ್ಕವರಿದ್ದಾಗ ಅಮ್ಮಂದಿರು ತಿಂಡಿ ತಿನ್ನಿಸುತ್ತಿದ್ದ ಬಗೆಯೇ ಬೇರೆ ತೆರನಾದುದು.ಪುಟ್ಟ ನೀ ತಿನ್ನದೆ ಹೋದ್ರೆ ಅಲ್ಲೋಡು ಗುಬ್ಬಿ ಬರತ್ತ ಇದೆ ಅದಿಕ್ಕೆ ಕೊಟ್ಟುಬಿಡ್ತೀನಿ ..ಬೇಗಾ ತಿನ್ನು ..ಇನ್ನು ಸ್ವಲ್ಪ ತಿನ್ನದೆ ಇದ್ರೆ ನೀನು ಆ ಗುಬ್ಬಿ ಹಾಗೆ ಚಿಕ್ಕದಾಗಿ ಬಿಡುವೆ ... ಗುಬ್ಬಿ ನೋಡುತ್ತಾ ,ಗುಬ್ಬಿಯಂತೆ ಚಿಕ್ಕದಾಗಿ ಬಿಡುವ ಭಯಕ್ಕೆ ಎಲ್ಲವನ್ನು ಖಾಲಿ ಮಾಡಿದುದಾಗಿತ್ತು.(ನಮಗೆಲ್ಲ ದೊಡ್ಡ ಬಾಲದ ಎತ್ತರದ ಹನುಮಂತನೇ ಆದರ್ಶ ).ಶಕ್ತಿವಂತ ಹುನುಮನ ಹಾಗೆ ಆಗ್ಬೇಕು ಎನ್ನುವ ಆಸೆಗೆ ಎಲ್ಲವನ್ನು ಖಾಲಿ ಮಾಡಿದ್ದಾಗಿತ್ತು..ಜೊತೆಗೆ ಗುಬ್ಬಿಗೆ ಕೊಡಬಾರದೆಂಬ ಸಿಟ್ಟಿಗೆ ತುತ್ತು ಅನ್ನ ನಮ್ಮ ಹೊಟ್ಟೆಗೆ ಇಳಿಯುತ್ತಿದ್ದದು ನಿಜ...

ಹಾಗೆಯೇ ಕೈತುತ್ತು ತಿಂದು ಬೆಳೆದ ಅಕ್ಕ ತನ್ನ ಮಗನಿಗೆ ಗುಬ್ಬಿ ಯನ್ನು ದೂರದರ್ಶನದಲ್ಲಿ ತೋರಿಸುವದನ್ನು ನೋಡಿ ವ್ಯಥೆ ಆಯಿತು.ಇಂದು ಅಳಿವಿನ ಅಂಚಿನಲ್ಲಿರುವ ಪಕ್ಷಿಗಳಲ್ಲಿ ಗುಬ್ಬಿಯು ಒಂದು .ನಮ್ಮ ಮನೆಯಂಗಳದಲ್ಲಿ ಕುಣಿದು ಕುಪ್ಪಳಿಸುತ್ತ ಹುಳು ಹುಪ್ಪಡಿ ,ಕಾಳು ,ತಿನ್ನುತ್ತಾ ,ಅಲ್ಲೇ ಒಂದು ಚಿಕ್ಕ ಬೆಚ್ಚನೆಯ ಗೂಡು ಕಟ್ಟಿ ತನ್ನ ಕುಟುಂಬ ಕಟ್ಟುತ್ತ ,ಇನ್ನೇನು ತಲೆಯ ಮೇಲೆ ಕುಳಿತು ಕೊಳ್ಳುವದೇನೋ ಎಮ್ಬಸ್ಟು ಹತ್ತಿರದಿಂದ ಹಾರುತ್ತ ..ನಿರ್ಭಯದಿಂದ ,ಸ್ವಚ್ಚಂದವಾಗಿ ಹಾರಿಕೊಂಡಿದ್ದ ಗುಬ್ಬಿ .......?


ಬಹುಷಃ ಮಲೆನಾಡಿನ ಭಾಗದಿಂದ ಬಂದವರಿಗೆ ಗುಬ್ಬಚ್ಚಿ (ಗುಬ್ಬಿ-House sparrow )ಎಂಬ ಪುಟ್ಟ ಹಕ್ಕಿ ತೀರ ಅಪರಿಚಿತವಾಗಿರಲಾರದು.ನಾನು ಬಹುವೇ ಇಸ್ಟ ಪಡುವ ಹಕ್ಕಿಗಳಲ್ಲಿ ಗುಬ್ಬಿಯು ಒಂದು.ಮನೆಯ ಎದುರಿನ ಪೇರಲೆಯ ಮರಕ್ಕೆ ಸದಾ ಆತು ಕೊಂಡಿರುತ್ತಿದ್ದ ಜುಟ್ಟ ಪಿಕಳಾರ,ಆಗಾಗ ಅತಿಥಿಯಂತೆ ಭೇಟಿ ಕೊಡುತ್ತಿದ್ದ ಮರಕುಟಿಗ, ಪ್ರೀತಿಯ ಹೋರ್ನಬಿಲ್ (ನೋಡಿದರೇನು ಪ್ರೀತಿ ಉಕ್ಕದು ),ನಮ್ಮ ಮನೆಯ ಎದುರಿನ ( ಆಲದ ಮರದ ಎಲೆಗಳ ಮರೆಯಲ್ಲಿ ಕುಳಿತು ಹಾಡುತ್ತಿದ್ದ (ಕಕೂ) ಕೋಗಿಲೆ.ಬೆಳಕಾಯಿತೆಂದು ಸಾರಲು ಬರುವ ಕಪ್ಪು ಕಾಗೆ ,ತನ್ನ ಪುಟ್ಟ ಚೊಂಚಿನಿಂದ ಮಕರಂದ ಹೀರಲು ಬರುವ ಪುಟ್ಟ ಹಕ್ಕಿ ..ಅದಕ್ಕೆ ಇರಬೇಕು ಬೆಳಕು ಹರಿಯುವ ಮುನ್ನ (ಚಿತ್ರ ಕೃಪೆ -ಅಂತರ್ಜಾಲ )ಏಳಬೇಕೆಂದು ಹಿರಿಯರು ಹೇಳುವದು.ಆದರೆ ಪ್ರೀತಿಯ ಗುಬ್ಬಿ ಮಾತ್ರ ಹಗಲಿಡಿ ಮನರಂಜಿಸುವ ಪಕ್ಷಿ .ಅಲ್ಲಲ್ಲೇ ಕುಪ್ಪಳಿಸುತ್ತ ,ಚಿವ್ ಚಿವ್ ಎನ್ನುತ್ತಾ ತಾನು ತನ್ನವರೆಂದು ಬಳಗವನ್ನೆಲ್ಲ ಕರೆದು ಮನೆಬಾಗಿಲಲ್ಲಿ ಅಕ್ಕಿ ಬಿದ್ದಿದ್ದರೆ ಅದನ್ನು ಪುಟ್ಟ ಚೊಂಚಿನಿಂದ ಆರಿಸಿ ತಿನ್ನುತ್ತಾ ತನ್ನ ಪಾಡಿಗೆ ಬದುಕುವ ನಿರುಪದ್ರವಿ ಜೀವಿ.ಸದಾ ಏನಾದರೊಂದನ್ನು ತಿನ್ನುತ್ತಲೇ ಇರುವ ಈ ಹಕ್ಕಿ ಮನೆಯ ಮಕ್ಕಳಿಗೆ ಎಸ್ಟೋ ಸಾರೆ ಉದಾಹರಣೆ ಆದುದು ಉಂಟು. .ಒಂದು ಕಾಲದಲ್ಲಿ ಮನೆಯ ಬಾಗಿಲಿಗೆ ಹಾಕಿರುತ್ತಿದ್ದ ದೇವರ ಫೋಟೋಗಳ ಮರೆಯಲ್ಲಿ ತನ್ನ ಪುಟ್ಟ ಗೂಡು ಕಟ್ಟಿ ಮನೆಯಲ್ಲೆಲ್ಲ ಗದ್ದಲ ಎಬ್ಬಿಸುತ್ತಿದ್ದ ಗುಬ್ಬಿ ಈಗ ಎಲ್ಲಿದೆ?

ವರದಿಗಳ ಪ್ರಕಾರ ಗುಬ್ಬಿಯ ಅಳಿವಿಗೆ ,ತೋಟ ಗದ್ದೆಗಳಿಗೆ ಈಗ ಬಳಸುವ ಕೀಟನಾಶಕ ಗಳು ,ರಾಸಾಯನಿಕಗಳು ವಂಶವಾಹಿಗಳ ಮೇಲೆ ತಮ್ಮ ಪ್ರಭಾವ ಬೀರಿ ಗುಬ್ಬಿಗಳ ಸಂತತಿ ವ್ರಧ್ಧಿ ಆಗದಂತೆ ಪರಿಣಮಿಸಿದೆ.ಅಲ್ಲದೆ ಅವುಗಳಿಗೆ ವಾಸಸ್ಥಾನ ,ತಿನ್ನಲು ಆಹಾರ ಎಲ್ಲವು ಕ್ರಮವಾಗಿ ದೊರಕುತ್ತಿಲ್ಲ..ಮನೆಯಲ್ಲಿ ಗುಬ್ಬಿಗೆಂದು ಕಾಳು ಹಾಕುವ, ಅಕ್ಕಿಯನ್ನು ಅಂಗಳದಲ್ಲಿ ಚೆಲ್ಲಲು ,ಆ ಖುಷಿಯನ್ನು ಆನಂದಿಸಲು ಯಾರಬಳಿಯೂ ವೇಳೆ ಉಳಿದಿಲ್ಲ .ಹಮ್...ಕಾಳು ಹಾಕಲು ಅಂಗಳವು ಉಳಿದಿಲ್ಲ...... ಅಮೇರಿಕಾದಂತಹ ದೇಶಗಳಲ್ಲಿ ಬರ್ಡ್ ಫೀಡಿಂಗ್ ಎನ್ನುವದು ಮುಖ್ಯವಾದ ಸ್ಥಾನ ಪಡೆದಿದೆ.,ಕಾರಣವಿಸ್ಟೆ ನಮ್ಮಲ್ಲಿನ ಹಾಗೆ ನೈಸರ್ಗಿಕ ಕಾಳುಗಳು ಅಲ್ಲಿನ ಪಕ್ಷಿಗಳಿಗೆ ದೊರೆಯುವದಿಲ್ಲ,ಎಲ್ಲವೂ ಹಿಮದರಾಶಿಯಲ್ಲಿ ಮುಚ್ಚಿರುತ್ತವೆ.ಮೈ ಕೊರೆಯುವ ಹಿಮಗಾಳಿಯ ನಡುವೆ ಚಿಕ್ಕಪುಟ್ಟ ಪಕ್ಷಿಗಳು ಹೇಗಾದರು ಹೊಟ್ಟೆ ತುಂಬಿಸಿ ಕೊಂಡಾವು ? ಅದಕ್ಕೆಂದೇ ಮಿಲಿಯನ್ ಗಟ್ಟಲೆ ಹಣವನ್ನು ತೊಡಗಿಸುತ್ತಾರೆ ಅಮೆರಿಕನ್ನರು .ವ್ಯವಸ್ಥೆಯನ್ನು ಮೆಚ್ಚಲೇ ಬೇಕಲ್ಲವೇ?

ಗುಬ್ಬಿಗಳನ್ನು ಉಳಿಸಲೇ ಬೇಕಾಗಿದೆ ,ಅದಕ್ಕಾಗಿ ಒಂದು ವ್ಯವಸ್ತಿತ ಪ್ರಯತ್ನ ನಡೆಯಬೇಕಾಗಿದೆ.



ಗುಬ್ಬಚ್ಚಿ ಗೂಡಿನಲ್ಲಿ ಬೆಚ್ಚಗೆ ಮಲಗಿ ನಿದ್ದೆ ಮುಗಿಸಿ ಕಣ್ಣು ತೆರೆಯುವ ಕಲ್ಪನೆಯೇ ಬಹಳ ಖುಷಿ ಕೊಡುವಂತದ್ದು.(ಗುಬ್ಬಚ್ಚಿ ಗೂಡು - ಗುಬ್ಬಿಗಳು ಕಟ್ಟುವ ಗೂಡು ಚಿಕ್ಕದಾಗಿ ಬೆಚ್ಚಗಿರುತ್ತದೆ ಎನ್ನುವ ಭಾವದಿಂದ ಆಪ್ತತೆ ಯನ್ನು ಉದಾಹರಿಸಲು ಬಳಸುತ್ತಾರೆ )ಗುಬ್ಬಚ್ಚಿ ಗೂಡು ಕೊಡುವ ಬೆಚ್ಚನೆಯ ಅನುಭವ,ಆಪ್ತ ಭಾವ ನಮ್ಮ ಮುಂದಿನ ಪೀಳಿಗೆ ಕಂಡೀತೆ ? ನಾವೆಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ ಖಂಡಿತವಾಗಿಯೂ ಇಲ್ಲ..

"ಗುಬ್ಬಚ್ಚಿ ಗೂಡಿನಲ್ಲಿ ಕಣ್ಣು ಮುಚ್ಚಿ .........."

ಹಳೆಯದೊಂದು ಲೇಖನ ಹೊಸ ಮನೆಗೆ ಬಂದಿದೆ ...ಅಲ್ಲಿನ ಎಲ್ಲ ಕೊಮೆಂಟುಗಳನ್ನು ಇಲ್ಲಿ ಸೇರಿಸಿದ್ದೇನೆ...
14 Comments - Show Original Post

Collapse comments


Aravind Hegde said...


different topic and very good writing!! Its time we start Save Gubbi campaign like Save Tiger !!

Monday, July 27, 2009

ಸಿಮೆಂಟು ಮರಳಿನ ಮಧ್ಯೆsaid...

ಶ್ವೇತಾ...
ನಿಜಕ್ಕೂ ಈ ಪಕ್ಷಿಗಳ ಬಗ್ಗೆ ತುಂಬಾ ಬೇಜಾರಾಗುತ್ತದೆ....

ಆದರೆ ನಮ್ಮಲ್ಲಿ ಒಂದು ಗುಬ್ಬಚ್ಚಿ ಸಂಸಾರ ಬಂದು ಗೂಡು ಕಟ್ಟಿದೆ...

ಅದೂ ಈ ಬೆಂಗಳೂರಲ್ಲಿ...!!

ನನ್ನ ಮಗನಿಗೆ ಅವಗಳಿಗೆ ಅಕ್ಕಿ ಕಾಳು ಹಾಕುವದೇ ಸಂಭ್ರಮ...
ಎಷ್ಟು ಮಜಾ ಅಂದ್ರೆ ತಾಯಿ ಗುಬ್ಬಚ್ಚಿ ತನ್ನ ಮರಿಗೆ ತಿಂಡಿ ತಿನ್ನಿಸುವದು...!

ಚಿಂವ್.. ಚಿಂವ್ ಅನ್ನುತ್ತ ತನ್ನ ಮರಿಗೆ ತಿನ್ನಿಸುವದನ್ನು ನೋಡಲು ಬಹಳ ಖುಷಿ ಆಗ್ತದೆ

ಆ ಪುಟ್ಟ ಮರಿ ತನಗೆ ಬೇಡ ಅಂತ ಓಡಿ ಹೋಗುವದು...! ವಾಹ್...



ದಯವಿಟ್ಟು ಕನ್ನಡದಲ್ಲೇ ಬರೆಯಿರಿ...

ನಿಮ್ಮ ಬರವಣಿಗೆ ಸುಂದರವಾಗಿದೆ...

ಖುಷಿಯಾಗುತ್ತದೆ...
ಅಭಿನಂದನೆಗಳು...
Monday, July 27, 2009

ಪಾಚು-ಪ್ರಪಂಚ said...

Shwetha,

Nammaneli Gubbacchi kutumbada ondu bhagane agittu..!

"Kakanna-gubbanna" kathe ella chikka makkaligoo gottirtu alda..!!

ashtu aapta namma jeevanadalli.

chandada lekhana, tumbane ishta aatu, sumaaru dinagala nantra matte kannadadalle baradde. continue..!

Monday, July 27, 2009

ಚಿತ್ರಾ said...

ಶ್ವೇತಾ ,

ನಿಮ್ಮ ಬ್ಲಾಗಿಗೆ ಮೊದಲ ಬಾರಿ ಬಂದಿದ್ದೇನೆ.

ಗುಬ್ಬಿಯ ಬಗ್ಗೆ ಚಂದದ ಬರಹ. ನನಗೂ ಕೂಡ ಗುಬ್ಬಿ ಎಂದರೆ ಬಹಳ ಪ್ರೀತಿ. ನನ್ನ ಹಳೆ ಮನೆಯ ಕಟ್ಟೆಯ ಮೇಲೆ ದಿನಾ ಬೆಳಿಗ್ಗೆ ಒಂದು ಮುಷ್ಟಿ ಅಕ್ಕಿ ಗುಬ್ಬಿಗಳಿಗಾಗಿ ! ೭.೩೦ ಯ ಸುಮಾರಿಗೆ ಅಲ್ಲಿ ಅಕ್ಕಿ ಇರಲಿಲ್ಲವೆಂದರೆ ಕಟ್ಟೆಯ ಮೇಲೆ ಕುಳಿತು ಅವು ಗಲಾಟೆ ಮಾಡುತ್ತಾ ಕರೆಯುವುದನ್ನು ನೋಡಲು ತಮಾಷೆಯೆನಿಸುತ್ತಿತ್ತು. ಈಗ ಹೊಸ ಮನೆಯಲ್ಲಿ ಒಂದು ಗುಬ್ಬಿಯೂ ಬರುವುದಿಲ್ಲ ! ಮುಖ್ಯ ರಸ್ತೆಯ ಪಕ್ಕಕ್ಕಿರುವುದರಿಂದಲೋ ಏನೋ ವಾಹನಗಳ ಗದ್ದಲದಲ್ಲಿ ಗುಬ್ಬಿಗಳ ಚಿಲಿಪಿಲಿ ಕೇಳಿ ಬರುತ್ತಿಲ್ಲ ! ಅದೇ ನನಗೆ ತುಂಬಾ ಬೇಜಾರು !
Monday, July 27, 2009

ಕ್ಷಣ... ಚಿಂತನೆ... Think a while said...

ಶ್ವೇತಾ ಅವರೆ, ಪ್ರಕಾಶ ಹೆಗ್ಡೆಯವರ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ. ಗುಬ್ಬಚ್ಚಿಯ ಲೇಖನ ಮತ್ತು ಚಿತ್ರ ನೋಡಿ ಸಂತಸ + ಬೇಸರವಾಯಿತು. ಬೇಸರ ಏಕೆಂದರೆ, ಈ ಗುಬ್ಬಚ್ಚಿಗಳನ್ನು ನಾವು ಚಿಕ್ಕವರಿದ್ದಾಗ ಬಹಳವಾಗಿ ನೋಡಿದ್ದೆವು. ಇಂದು ನಗರಗಳಲ್ಲಿ ಇವುಗಳ ಸಂಖ್ಯೆ... ಇಲ್ಲವೇ ಇಲ್ಲ ಎನಿಸುತ್ತದೆ. ಇವುಗಳ ಹಾರಾಟ, ಕೂಗು ಇವುಗಳೆಲ್ಲ ನೆನಪಿಸಿಕೊಳ್ಳಬೇಕಷ್ಟೆ. ಹಳ್ಳಿಗಳಲ್ಲಿಯೂ ಇವುಗಳ ಸಂತತಿ ಕ್ಷೀಣಿಸಿರಬಹುದು.
ಧನ್ಯವಾದಗಳು,
ಚಂದ್ರಶೇಖರ ಬಿಎಚ್.
Monday, July 27, 2009

shivu said...

ಶ್ವೇತ ಮೇಡಮ್,
ಗುಬ್ಬಚ್ಚಿ ಬಗ್ಗೆ ನೀವು ಬರೆದಿರುವ ಲೇಖನ ತುಂಬಾ ಚೆನ್ನಾಗಿದೆ. ಅವುಗಳ ಸದ್ಯದ ಪರಿಸ್ಥಿತಿಯನ್ನು ಚೆನ್ನಾಗಿ ವಿವರಿಸಿದ್ದೀರಿ..

ಸದ್ಯ ಬೆಂಗಳೂರಲ್ಲಿ ಗುಬ್ಬಚ್ಚಿ ಕಾಣಲು ಸಿಗದು. ಆದ್ರೆ ನಮ್ಮ ಊರಿಗೆ ಹೋದರೆ ದಾರಾಳ ಸಿಗುತ್ತವೆ.
ಅಮೇರಿಕಾದಲ್ಲಿ ಗುಬ್ಬಚ್ಚಿ ಪಕ್ಷಿಗಳ ಬಗೆಗಿನ ಕಾಳಜಿಯನ್ನು ನಮ್ಮವರು ನೋಡಿ ಕಲಿಯಬೇಕು.
ಚಿತ್ರಸಹಿತ ಲೇಖನವನ್ನು ಮಾಹಿತಿಯುಕ್ತವಾಗಿ ಬರೆದಿದ್ದೀರಿ..ಧನ್ಯವಾದಗಳು.

Monday, July 27, 2009

Shweta Bhat said...

@Aravind Hegde,

Thanks Aravind,
Not only Gubbi but also Jackle included in the list.AS per the reports Jackle also one of the birds under extinct
Tuesday, July 28, 2009

Shweta Bhat said...

ಪ್ರಕಾಶಣ್ಣ ,

ಅಂತೂ ಗುಬ್ಬಿ ಇನ್ನು ಕಾಣಲಿಕ್ಕೆ ಉಳಿದಿದೆ ಎಂದಾಯಿತು.ನಾನು ಗುಬ್ಬಿಯನ್ನು ನೋಡಿ ವರ್ಷಗಳೇ ಕಳೆದಿದೆ..

ಕನ್ನಡದಲ್ಲಿ ಟೈಪ್ ಮಾಡುವದು ಬಹಳ ಕಷ್ಟ .ಅದಿಕ್ಕೆ ಇಂಗ್ಲೀಷಿನಲ್ಲಿ ಬರೆಯುತ್ತಿದ್ದೆ.. ಅಲ್ಲದೆ ನನ್ನ ವೃತ್ತಿ ಪ್ರವೃತ್ತಿ ಎರಡೂ ಬೇರೆ ಬೇರೆ ಎಲ್ಲರ ಹಾಗೆ .

ಮುಂದೆ ಕನ್ನಡದಲ್ಲಿಯೂ ಬರೆಯುತ್ತೇನೆ...

ನಿಮ್ಮ ಬ್ಲೋಗು ನನ್ನ ಮೆಚ್ಚಿನ ಬ್ಲೋಗುಗಲ್ಲಿ ಒಂದು .ನನ್ನ ಸ್ನೇಹಿತರಿಗೆಲ್ಲ ಲಿಂಕನ್ನು ಕಳುಹಿಸಿದ್ದೇನೆ.

ಹೀಗೆ ಬರುತ್ತಿರಿ.ತುಂಬಾ ಧನ್ಯವಾದಗಳು.

ಹಳೆಯದೊಂದು ಲೇಖನ ಹೊಸ ಮನೆಗೆ ಬಂದಿದೆ ...ಅಲ್ಲಿನ ಎಲ್ಲ ಕೊಮೆಂಟುಗಳನ್ನು ಇಲ್ಲಿ ಸೇರಿಸಿದ್ದೇನೆ...

Tuesday, July 28, 2009

Shweta Bhat said...

@paapu prapancha,

ಥ್ಯಾಂಕ್ಸ್ ಪ್ರಶಾಂತ್,

ಹೌದು ಊರಲ್ಲೆಲ್ಲ ಹಾಗೆ ಅಲ್ದಾ? ಆದ್ರೆ ಈಗ ಎಲ್ಲೂ ಕಾಣಲೇ ಸಿಕ್ತಾ ಇಲ್ಲೆ ಗುಬ್ಬಿ...ಅದೇ ಗತಿ ಹದ್ದಿಗು ಬಂಜು...ಗುಬ್ಬಿ ಮತ್ತು ಹದ್ದು ಎರಡು ಅಳಿವಿನ ಅಂಚಿನಲ್ಲಿರುವ ಪಕ್ಷಿಗಳ ಲ್ಲಿಸ್ಟ್ ಗೆ ಸೇರಿದ್ದ.....

Tuesday, July 28, 2009

Shweta Bhat said...

ಥ್ಯಾಂಕ್ಸ್ ಚಿತ್ರಾ....

ನನ್ನ ಪುಟ್ಟ ಬ್ಲಾಗಿಗೆ ಸ್ವಾಗತ....

ನಮ್ಮ ಊರುಗಳಲ್ಲಿದ್ದ ಹಾಗೆ ಗಿಡಮರಗಳು ಇಲ್ಲ ,ಸಹಜವಾಗಿ ವೈವಿಧ್ಯಮಯ ಹಕ್ಕಿ ಗಳು ಮಾಯವಾಗುತ್ತಿವೆ.ನೆನೆಸಿಕೊಂಡರೆ ತುಂಬಾ ಬೇಜಾರಾಗುತ್ತದೆ..ಮುಂದಿನ ಮಕ್ಕಳಿಗೆಲ್ಲ ಗುಬ್ಬಿಯಂತ ಹಕ್ಕಿಗಳನ್ನು ಚಿತ್ರದಲ್ಲಿ ಮಾತ್ರ ತೋರಿಸುವ ಸ್ಥಿತಿ ಬಂತಲ್ಲ ಎಂದು.

ನಿಮ್ಮ ಬ್ಲಾಗಿಗೂ ಭೇಟಿ ಕೊಟ್ಟಿದ್ದೆ ..ತುಂಬಾ ಚೆನ್ನಾಗಿದೆ.ಮಳೆಯಾ ಆರ್ಭಟ ಓದಿ ಕಂಗಾಲಾದೆ.

ಹೀಗೆ ಬರುತ್ತಾ ಇರಿ ....

Tuesday, July 28, 2009

Shweta Bhat said...

@ಚಂದ್ರಶೇಖರ್,

ತುಂಬಾ ಧನ್ಯವಾದಗಳು ಸರ್. ಹೀಗೆ ಬರುತ್ತಾ ಇರಿ. ...ಹಳ್ಳಿ ಗಳಲ್ಲಿಯೂ ಈಗೀಗ ಬಣ್ಣ ಬಣ್ಣದ ಹಕ್ಕಿಗಳು ಮಾಯವಾಗುತ್ತಿದೆ.

ನಮ್ಮ ಮನೆಯ ಅಂಗಳದಲ್ಲಿ ಒಂದು ಪೇರಳೆಯಾ ಮರವಿತ್ತು .ಅದಿಕ್ಕೆ ಬಣ್ಣ ಬಣ್ಣದ ಹಕ್ಕಿಗಳೆಲ್ಲ ಬರುತ್ತಿದ್ದವು ,ಈಗ ಮಂಗಗಳ ಹಾವಳಿ ತಡೆಯಲಾರದೆ ಆ ಮರವನ್ನೇ ಕತ್ತರಿಸಿ ಬಿಟ್ಟಿದ್ದಾರೆ . ಹೀಗೆ ಬೇರೆಡೆಯೂ ಏನೇನೋ ಕಾರಣ ಗಳಿಂದ ಹಕ್ಕಿಗಳು ತಮ್ಮ ನೆಲೆ ಕಳೆದುಕೊಳ್ಳುತ್ತಿವೆ.ಕಣ್ಮರೆ ಆಗುತ್ತಿವೆ..ನಿಜಕ್ಕೂ ಖೇದನೀಯ ವಿಚಾರ.
Tuesday, July 28, 2009

Shweta Bhat said...

@ಶಿವೂ ಸರ್ ,

ನಮ್ಮೂರಲ್ಲಿ ಅಂತು ಗುಬ್ಬಿ ಕಾಣಸಿಗದು ..

ನಮ್ಮ ದೇಶದಲ್ಲಿ ಮನುಷ್ಯ ಜೀವಕ್ಕೆ ಬೆಲೆಯಿಲ್ಲ ಇನ್ನು ಹಕ್ಕಿಗಳ ಬಗೆಗಿನ ಕಾಳಜಿ ಕನಸಿನ ಮಾತು...ಸಲಿಂ ಅಲಿ ಯಂತಹ ಪಕ್ಷಿ ಪ್ರೇಮಿಗಳು ಅಲ್ಲಲಿ ಸಿಗುತ್ತಾರೆ ಆದರೆ ವ್ಯವಸ್ತಿತ ಸಂಘಟನೆ ಆಗದ ಹೊರತು ಪಕ್ಷಿಗಳ ಸಂರಕ್ಷಣೆ ನನಸಾಗದು.
ಹೀಗೆ ಬರುತ್ತಾ ಇರಿ ,..ಧನ್ಯವಾದಗಳು.
Tuesday, July 28, 2009


ಜಿ.ಎಸ್.ಬಿ. ಅಗ್ನಿಹೋತ್ರಿ said...

ಶ್ವೇತಾ

ನಿಮ್ಮ ಗುಬ್ಬಚ್ಚಿ ಕತೆ ಓದಿ ತುಂಬಾ ಬೇಸರ ಆಯಿತು. ಒಂದು ದುರದೃಸ್ಟದ ಸಂಗತಿ ಎಂದರೆ ಈ ಗುಬ್ಬಚ್ಚಿ ಇಂದು ಅವಸಾನದ ಅಂಚಿನಲ್ಲಿದೆ. ನನ್ನ ಆಯಿ(ಅಮ್ಮ) ನಾನು ಸಣ್ಣಕಿರಕಾದ್ರೆ ಗುಬ್ಬಚ್ಚಿ ತೋರಿಸ್ತಾನೆ ಊಟ ಮಾಡಿಸ್ತಿತ್ತು. ಆದ್ರೆ ಇಂದಿನ ಮಕ್ಕಳಿಗೆ ಈ ಯೋಗ ಇಲ್ಲ. ಮೊಬೈಲ್ ತರಂಗಗಳಿಗೆ ಗುಬ್ಬಚ್ಚಿ ಇಂದು ಊರು ಬಿಡುತ್ತಿವೆ. ಸಂತಾನ ಯೋಗವನ್ನು ಕಳೆದುಕೊಳ್ಳುತ್ತಿವೆ. ಹೀಗಾಗಿಯೇ ತೀರ ಅಪರೂಪವಾಗುತ್ತಿವೆ. ಮೊಬೈಲ್ ತರಂಗಗಳು ಎಲ್ಲಿಲ್ಲವೂ ಅಲ್ಲಿಗೆ ಹೋಗಿ ಬದುಕು ಕಾಣಲು ಪ್ರಯತ್ನಿಸುತ್ತಿವೆ.

ನೀವು ಕೋಟ್ ಮಾಡಿದಂತೆ "ತೋಟ ಗದ್ದೆಗಳಿಗೆ ಈಗ ಬಳಸುವ ಕೀಟನಾಶಕ ಗಳು ,ರಾಸಾಯನಿಕಗಳು ವಂಶವಾಹಿಗಳ ಮೇಲೆ ತಮ್ಮ ಪ್ರಭಾವ ಬೀರಿ ಗುಬ್ಬಿಗಳ ಸಂತತಿ ವ್ರಧ್ಧಿ ಆಗದಂತೆ ಪರಿಣಮಿಸಿದೆ....." ಇದೂ ಒಂದು ಕಾರಣ.

ಆದರೆ ನನ್ನ ಪ್ರಕಾರ ಅವೆಲ್ಲಕ್ಕಿಂತ ಇಂದಿನ ಮೊಬೈಲ್ ತರಂಗಗಳು ಸಾಕಸ್ಟು ಪರಿಣಾಮ ಬೀರುತ್ತಿವೆ. ಸಾಮಾನ್ಯವಾಗಿ ನನ್ನು ಭೇಟಿ ನೀಡುವ ಊರಲ್ಲಿ ಈ ವಿಚಾರವಾಗಿ ಅದ್ಯನ ನಡೆಸಿದ್ದೇನೆ. ನನಗೆ ಪ್ರಮುಖವಾಗಿ ಕಾಣಿಸಿದ್ದು ಇದೆ. ಒಮ್ಮೆ ಯೋಚಿಸಿ ಮೊಬೈಲ್ ಬರುವುದಕ್ಕೂ ಪೂರ್ವದಲ್ಲಿ (ಅಂದರೆ ಹತ್ತನ್ನೆರಡು ವರ್ಷಗಳ ಹಿಂದೆ) ಗುಬ್ಬಚ್ಚಿ ನಮಗೆ ಅದೆಸ್ಟೂ ಮನೆಗಳಲ್ಲೂ ಕಾಣುತ್ತಿತ್ತು. ಆದರೆ ಈಗ ಅಲ್ಲೂ ಇಲ್ಲ. ಮೊಬೈಲ್ ಬರುವುದಕ್ಕೂ ಮೊದಲೂ ಕೀಟನಾಶಕ ಗಳು , ರಾಸಾಯನಿಕಗಳು ಬಳಕೆಯಲ್ಲಿದ್ದವು ಅಲ್ಲವೇ?



ಕೇವಲ ಗುಬ್ಬಚ್ಚಿಯಸ್ಟೇ ಅಲ್ಲ....

ಹೌದು ಮೊಬೈಲ್ ತರಂಗಗಳಿಂದ ಸಂತಾನೋತ್ಪತ್ತಿಯ ಸೌಭಾಗ್ಯ ಕಳೆದು ಕೊಂಡಿರುವು ಗುಬ್ಬಚ್ಚಿ ಮಾತ್ರ ಅಲ್ಲ. ಮನುಷ್ಯ ಕೂಡ. ಮೊಬೈಲ್ ತರಂಗಗಳಿಂದ ವೀರ್ಯ ಉತ್ಪಾದನೆ ಕ್ಷಿಣಿಸುತ್ತೆ ಅನ್ನೋದನ್ನು ವೈದ್ಯರು ಈಗಾಗಲೇ ಖಾತ್ರಿ ಪಡಿಸಿದ್ದಾರೆ.(ಇದಕ್ಕೆ ಕೆಲವರ ಪ್ರತಿವಾದವು ಇದೆ. ಇಲ್ಲ ಎನ್ನುವುದಿಲ್ಲ...) ವೈದ್ಯರು ಹೇಳಿದ್ದು ಸರಿ ಎನಿಸಿದೆ. ಹಾಗೇ ವನ್ಯಜೀವಿಗಳಲ್ಲೂ ಈ ಬದಲಾವಣೆ ಆಗಿದೆ. ಆಗುತ್ತಿವೆ.

ಗುಬ್ಬಚ್ಚಿ ಜಾತಿಗೆ ಸೇರುವ ಅನೇಕ ಚಿಕ್ಕ ಚಿಕ್ಕ ಹಕ್ಕಿಗಳು ಇಂದು ಈ ಸಮಸ್ಯೆಯ ಸುಳಿಗೆ ಸಿಕ್ಕಿದೆ.



Shweta Bhat said...


@ಅಗ್ನಿಹೋತ್ರಿ ಸರ್
ನೀವು ಹೇಳಿದ್ದು ಸರಿ ....ನಾನು ಬರೆಯುವಾಗ ಅದನ್ನು ಮರೆತು ಬಿಟ್ಟಿದ್ದೆ.ನೆನಪಿಸಿದ್ದಕ್ಕೆ ತುಂಬಾ ಧನ್ಯವಾದಗಳು..

ಎಲೆಕ್ಟ್ರೋ ಮ್ಯಾಗ್ನೆಟಿಕ್ ಸ್ಪೆಕ್ಟ್ರುಂ ನ Radio Frequency Radiation (RFR) ಭಾಗದ ಮೈಕ್ರೋ ತರಂಗಗಳು(Microwaves Radiation) ತುಂಬಾ ಕೆಟ್ಟ ಪರಿಣಾಮ ಬೀರುತ್ತಿವೆ..ಈ ಪಟ್ಟಣದಲ್ಲಂತೂ ಮನುಷ್ಯರ ಮನೆಗಳೇ ಚಿಕ್ಕ ಗುಬ್ಬಚ್ಚಿ ಗೂಡ ಹಾಗೆ ಇದ್ದು ಇನ್ನು ಗುಬ್ಬಿಗಳಿಗೆ ಗೂಡಿನ ಮಾತು ಕನಸೇ ಸರಿ.

ತಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು.
Tuesday, July 28, 2009

ಸೋಮವಾರ

ಒಂದು ಹಳೆಯ ಯೋಚನೆಗೆ ಹೊಸ ಓಘ

Ping the IP, Follow The Packet, Leave the Rest!



ಮೊನ್ನೆ ನನ್ನ ಚಿಕ್ಕಪ್ಪನೊಬ್ಬ ಕರೆ ಮಾಡಿ ಬೆಂಗಳೂರಿನ ಬಗ್ಗೆ ಬಹಳ ವಿಚಾರಿಸುತ್ತಿದ್ದ. ...

ಬೆಂಗಳೂರಲ್ಲಿ ಮನುಷ್ಯರು ಇದ್ದಾರೋ ?

ನನಗೆ ಸಿಕ್ಕಾಪಟ್ಟೆ ನಗು ಬಂತು , ಇದ್ಯೇನಪ್ಪ ಬುಡಕ್ಕೆ ಕತ್ತರಿಯಲ್ಲ ಎಂದು .
ನಾನು ಇಲ್ಲೇ ಇದ್ದೇನಪ್ಪ ಎಂದು ಸುಮ್ಮನಾದೆ..
ಏನಮ್ಮಾ ಅಲ್ಲಿನ ಜನರು ಊರುಹೇಗೆ?.
ಈ ಊರಿನ ವಿಶೇಷವೇನೆಂದರೆ, ಇಲ್ಲಿನವರಿಗೆ ಇಂಗ್ಲೀಷು ಗೊತ್ತು :)
ಅದೇ ,ಡೆಡ್ ಎಂಡ್ ,ರೈಟು,ಲೆಫ್ಟು,ಫ್ಲಾಟು,ಡಿಸ್ಕೌಂಟು,
ಅಲ್ಲಮ್ಮ ಅಲ್ಲಿಯೂ ಬದುಕು ಸಾಗುತ್ತಲ್ಲ?
ಹಾಹಾ ಹೆಹೆ .. ಇಲ್ಲಿ ಬದುಕು ಓಡುತ್ತೆ. ನಿಲ್ಲದೆಯೇ, ಹಿಂದಿನ ನೆನಪಿಲ್ಲದೆಯೇ, ನಿನ್ನೆಯ ಹಂಗಿಲ್ಲದೇ,ಯಾರಿಗೂ ಕಾಣದೆಯೇ; ಹಾಂ.ಅಲ್ಲ ಚಿಕ್ಕಪ್ಪ .....ಹೊಗೆ,ಗಿಜಿಗುಡುವ ರಸ್ತೆ,ನಿಲುಕದ ಗಲಾಟೆ, ಅಯ್ಯಪ್ಪ!...ಸಾಕು ಇದರ ಸಹವಾಸ , ಎನ್ನುವಷ್ಟು ನನ್ನ ನೆಮ್ಮದಿ ಕೆಡಿಸಿದೆ.
ಇರ್‍ಲಿ ಬಿಡಮ್ಮ ಅದು ಮುಗಿಯದ ಕತೆ.ಹ್ಮ್.
ಚಿಕ್ಕಪ್ಪ ನಿಂಗೊತ್ತಾ?
'ಉನ್ನತವಾದ ಶಿಖರ ಗಳು ನಿರ್ಮಾನುಷ ವಾದುದು', ಧನ,ಜ್ಞಾನ,ಇವೆರಡೂ ಅಥವಾ ಜ್ಞಾನ ಧನ ಸಂಚಾಯವಾದಂತೆ ಮನುಷ್ಯ ಸಾಮಾನ್ಯರಿಂದ ದೂರವಾಗುತ್ತಾ ಹೋಗುತ್ತಾನಂತೆ! ಅಸಲು, ಆತನಿಗೆ ಮೂಡ್ ಇರೋದಿಲ್ಲ :)!

ಈ ನುಡಿ ನನ್ನನ್ನು ತುಸು ಕೆಣಕಿದ್ದು ನಿಜ. ಜೀವನದಲ್ಲಿ ಮಾನಸಿಕ ಔನತ್ಯ ತಾಳ್ಮೆ ಯನ್ನು ನಿರೀಕ್ಷಿಸಿದಂತೆ, ಬೌದ್ಧಿಕತೆ ವಾಸ್ತವದ ಚಿತ್ರಣ ಕೊಡುತ್ತೆ. ಅಲ್ಲವ?
ಮಾನಸಿಕ ಔನತ್ಯ ಬುದ್ಧಿಯ ಭ್ರಮೆ ಸರಿದಾಗ ಬಹು ನಿಚ್ಚಳ. ಆಗ ಮನಕ್ಕೆ ಸಿಗುವ ಕುಶಿ, ವೌ ವಾವ್....Mega Martu ಕೊಡೋಲ್ಲ, Brand Factoryಲು ಸಿಗೋಲ್ಲ...

ನನ್ನ ಸ್ನೇಹಿತರೊಬ್ಬರು 'ಮಾಫಲೇಷು ಕದಾಚನ'ಕ್ಕೆ ಒಂದು ಟೆಕ್ನಿಕಲ್ ಡೆಫಿನೇಶನ್ ಕೊಟ್ಟಿದ್ದರು ;Ping the IP,Follow The Packet, Leave the Rest ....IP,Ping,Packet etc ಕಂಪ್ಯೂಟರ್ ನೆಟ್‌ವರ್ಕ್ನಲ್ಲಿ ಬರುವ ಕಾನ್ಸೆಪ್ಟ್ ಗಳು ಇವೆಲ್ಲ...

Because, Life is the Way you see it!!


ನಮ್ಮನ್ನು ನಾನು ಈಜಲು ಬಿಡಬಾರದು , We should float !!ಲೈಫ್ ನಲ್ಲಿರೋ ಕುಶಿ ಆವಾಗ ಕಾಣಸಿಗುತ್ತೆ..ಹಾಂ ಕಾಣೋಕೆ ಎಲ್ಲೂ ಹುಡುಕೋ ಅವಶ್ಯಕತೆ ಇಲ್ಲ.ನಮ್ಮಲ್ಲೇ ಇರುತ್ತೆ...ಅದನ್ನ ಹುಡುಕೋದೇ ಜೀವ್ನವಾ

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...