ಗುರುವಾರ

ಪರಿಮಳವೆಂದರೇ ವಾಸನೆ ಇಲ್ಲದ್ದು..!

ರಿಮಳವೆಂದರೆ ವಾಸನೆ ಇಲ್ಲದ್ದ ? ಹಾಂಗಂದರೆ ಉತ್ಪ್ರೇಕ್ಷೆ ಏನಿಲ್ಲವಲ್ಲ?ಏಕೆಂದರೆ ಪರಿಮಳೆವೆಂದರೆ ಹಿಗ್ಗುವ ಮೂಗಿನ ಹೊಳ್ಳೆ ,ವಾಸನೆ ಎಂದರೆ ಸಾರಾಸಗಟಾಗಿ ಬೇಡವೇ ಬೇಡ ಎಂದು ತಿರಸ್ಕರಿಸುವದು ಸುಳ್ಳಲ್ಲ... ಅಲ್ಲವ?
ಜಾಜಿ ಮಲ್ಲಿಗೆಯ ಕಂಪು ಇದು ,ಕೆಂಡ ಸಂಪಿಗೆಯ ಕಂಪು ಇದು ,ನೆಹ್ರು ಗುಲಾಬಿ ಇದು,ಇದು ಕೇದಿಗೆಯದೇ ಪರಿಮಳ ,ಕಣ್ಣು ಕಟ್ಟಿದರೂ ಸಲೀಸಾಗಿ ಹೇಳಿಬಿಡಬಹುದಲ್ಲ? ಮೂಗಿನ ಹತ್ತಿರ ಶ್ರೀ ಗಂಧದ ತುಂಡು ಹಿಡಿದು. ಇದು ಸಾಗುವಾನಿ ಎಂದೋ,ಬೀಟೆಯದೆಂದೋ ಹೇಳಿದರೆ ಸುಮ್ಮನೇ ಬಿಟ್ಟೀತೆ ನಿಮ್ಮ ಮೂಗು ?ನನಗೆ ಪರಿಮಳ ಪರಿಚಿತವೆನ್ನುತ್ತೆ...ಅಲ್ಲವ? ಪರಿಮಳ ವನ್ನು ಡಿಫೈನ್ ಮಾಡಬಹುದು,ಹಲವು ರೀತಿಯಲ್ಲಿ ವ್ಯಾಖ್ಯಾನಿಸಬಹುದು ,,, ಪರಿಮಳಕ್ಕೆ ಸುಗಂಧ ,ಸುವಾಸನೆ, ಕಂಪು ಎನ್ನುತ್ತದಲ್ಲ ಸಂಸ್ಕೃತ ,ಕನ್ನಡ ಭಾಷೆಗಳು ...! ಸು ಎಂದರೆ ಒಳ್ಳೆಯ,ಶುಭ,ಎಂದೆಲ್ಲ ಅರ್ಥವಿದೆ ಸಂಸ್ಕೃತದಲ್ಲಿ. ಆದರೆ ನನಗೆ ಈಗಲೇ ತೋರಿಸು ಪರಿಮಳವನ್ನ ಎಂದರೆ? ಪರಿಮಳವನ್ನ ತೋರಿಸೋಕಂತು ಆಗೋಲ್ಲ..(ಪರಿಚಿತರಲ್ಲೆಲ್ಲಾದರೂ ಪರಿಮಳ ಎನ್ನುವವರಿದ್ದರೆ ಅದು ಬೇರೆಯ ಪ್ರಶ್ನೆ!)ಅನುಭವಿಸಿಯೇ ಅರಿಯಬೇಕು ...

ಪಂಚೇಂದ್ರಿಯಗಳಾದ ,ಮೂಗು,ನಾಲಿಗೆ,ಕಣ್ಣು ,ಕಿವಿ, ಚರ್ಮ ಗಳ ನಡುವೆ ಒಂದು ಸಾರೇ ಶೀತಲ ಕಲಹವಾಯಿತಂತೆ, ಎಲ್ಲವಕ್ಕೂ ತಾನು ಮೇಲೆಂಬುದನ್ನು ತೋರ್ಪಡಿಸುವ ಹಮ್ಮು. ತೀರ್ಪುಗಾರರು ನಾರದ ಮುನಿ. ಯಾರು ವಿಜಯೀ ಆದರು ಎಂಬುದನ್ನ ಇಲ್ಲಿ ಪ್ರಸ್ತಾಪಿಸುವ ಅಗತ್ಯ ಇಲ್ಲ. ಆದರೆ ಆ ಸ್ಪರ್ಧೆಯಿಂದ ಅವು ಕಲಿತ ಪಾಠ ಮಾತ್ರ ಶ್ಲಾಘನೀಯ.. ಸ್ಪರ್ಧೆ ಮುಗಿದ ನಂತರ ಒಂದೊಂದು ಇಂದ್ರೀಯವೂ ಮುಖ್ಯವಾದುದು ಎಂಬುದು ನಾರದ ಮುನಿಗಳ ತೀರ್ಪಾಗಿತ್ತು..!
ಆದ್ದರಿಂದ ನಮ್ಮ ಪರಿಮಳ ವನ್ನ ಆಸ್ವಾದಿಸುವ ಮೂಗು ತನಗೆ ಸಿಕ್ಕ ಪ್ರಾಮುಖ್ಯತೆ ಇಂದ ಚೂರು ಕುರುಬಿದ್ದು ಸುಳ್ಳಲ್ಲ... ಷ್ಟೆಲ್ಲಾ ಉಪಮೆಗಳಿದ್ದಾವೆ ಪರಿಮಳವನ್ನ ಉದಾಹರಿಸಿ ..ಒಂದು ನನ್ನ ನೆನಪಿಗೆ ಬಂದಿದ್ದು ‘ಕತ್ತೆ ಬಲ್ಲುದೇ ಕಸ್ತೂರಿ ವಾಸನೆ’ ಎಂಬ ನುಡಿ .ಕೆಲವೊಂದು ಸಾರೇ ಪೂರ್ವಾಗ್ರಹ  ಪೀಡಿತರಾಗಿ ತಮ್ಮ ಮನಸಿಗೆ ತೋಚಿದ್ದನ್ನ ಬರೆಯುವವರಿಗೆ,ನುಡಿಯುವವರಿಗೆ,ವಸ್ತು ಒಂದರ ಪ್ರಾಮುಖ್ಯತೆ ಅರಿಯಲು ಶಕ್ತನಲ್ಲದವಗೆ ಈ ಉಪಮೆ ಉತ್ತಮ ಬಲಕೊಡುತ್ತದೆ..

ರಿಮಳ ಬೀರುವ ಕುಸುಮಗಳು ,ಮನಕ್ಕೆ ತಂಪನ್ನೀಯುವದಷ್ಟೆ ಅಲ್ಲ ಆರೋಗ್ಯವನ್ನು ಸುಧಾರಿಸುತ್ತದಲ್ಲ...?ಅದಕ್ಕೆಂದೇ ಪರಿಮಳ ಚಿಕಿತ್ಸೆ ಇದೆಯಲ್ಲಾ... ಅಂದಿನ ರಾಜರ ಕಾಲದಲ್ಲಿ ರಾಜ-ರಾಣಿಯರ ಸ್ನಾನದ ಕೊಳಗಳಿಗೆ ,ಮಲ್ಲಿಗೆ ,ಸಂಪಿಗೆ,ಜಾಜಿ,ಸುಗಂಧರಾಜಗಳಂತ ಪರಿಮಳ ಭರಿತ ಹೂಗಳನ್ನ ಹಾಕುತ್ತಿದ್ದರಂತೆ ,ದೇಹಕ್ಕಾದ ದಣಿವು ನಿವಾರಿಸಿ ,ಮನಕ್ಕೆ ಚೈತನ್ಯ ತುಂಬುವ ಶಕ್ತಿ ಇದೆ ಎಂಬುದು ಅವರ ಉದ್ದೇಶ . ದೇವರನ್ನ ನೆನೆಯುವ ಮನ ತಂಪಾಗಿರಲಿ ಎಂದು ಹಚ್ಚುವ ಆಗರ ಬತ್ತಿ,ಪೂಜಿಸಿದ ಮನ ಸದಾ ಸಂತಸದಿಂದ ಇರಲೆಂದು ಸೇವಿಸುವ ಪಚ್ಚಕರ್ಪೂರವನ್ನು ಹಾಕಿದ ತುಳಸಿಯ ತೀರ್ಥ. ಒಂದೆರಡು ದಿನ ಸ್ನಾನ  ಮಾಡದೇ ಇದ್ದರೂ ನಡೆದೀತೆಂದು ಉಪ್ಯೋಗಿಸುವ ಅತ್ತರು,ಪರ್ಫ್ಯೂಮ್ ,ಡಿಯೊ,....ಎಲ್ಲ ಪರಿಮಳದ ಉತ್ಪನ್ನಗಳೇ, ಎಲ್ಲವನು ವಿಷ್ವಲೈಸ್ (visualize ) ಮಾಡುವ ಇಂದಿನ ಯುಗದಲ್ಲಿ ಪರಿಮಳ ವೆಂದರೆ ರೆಕ್ಸೋನ,ಚಾರ್ಲಿ,ಎಂಬೆಲ್ಲಾ ತರಾವರಿ ಪರಿಮಳಗಳು , ವಾಸನೆ ಎಂದರೆ ಗಬ್ಬೆದ್ದು ನಾರುವ ಚರಂಡಿ ನೆನಪಿಗೆ ಬರುತ್ತಾವಲ್ಲ... ಯಾರಿಗಾದರೂ ಮಹಾಭಾರತದ ಯೋಜನಗಂಧಿ ನೆನಪಿಗೆ ಬರುತಾಳ? ಬಂದಿದ್ದರೆ, ನಿಜವಾಗ್ಲೂ ಗ್ರೇಟು ಕಣ್ರೀ ನೀವು .... ದುಡ್ಡಿಗೋ,ಒಡವೆಗೂ,ರಾಜ್ಯಕ್ಕೋ,ಹೆಣ್ಣಿಗೋ,ಹೊಟ್ಟೆಗೆಂದೋ ,ಯುದ್ದಗಳಾಗಿವೆ , ರಕ್ತಪಾತಗಳು ಆಗುತ್ತಲೇ ಇವೆ...,ಆದರೆ ಪರಿಮಳಕ್ಕಾಗಿ ಆಗಿಯೇ ಇಲ್ಲ ಎಂದು ನನ್ನೆಲ್ಲ ತಿಳುವಳಿಕೆಯನ್ನ ಒಟ್ಟಿಗಿತ್ತು ಹೇಳುತ್ತೇನೆ.. ಹಾಂ ವಾಸನೆಯಿಂದ ಆಗಿವೆ ಗೊತ್ತಲ್ಲ, ಕಾರ್ಬನ್ ಡೈಯಾಕ್ಸೈಡ್,ಕ್ಲೋರೋಫಾರ್ಮ್ ,ಸೈಯನೈಡ್ ಎಲ್ಲ ಬದಿಗಿಡಿ, ಪ್ರಾಣವನ್ನೇ ಕಿತ್ತಿದ್ದಾವೆ..

ಈಗ್ಲಾದ್ರೂ ಒಪ್ಕೋ ತೀರಾ? ಪರಿಮಳವೆಂದರೆ ವಾಸನೆ ಇಲ್ಲದ್ದು, ವಾಸನೆ ಅಲ್ಲದ್ದು…..ಪೋಲೀಸ್ ರ ನಾಯಿಯನ್ನ ಬಿಟ್ಟೇಬಿಟ್ಟಿದ್ದೆ..ಅದಕ್ಕೆ ಪರಿಮಳ ವಾಸನೆ ಎರಡೂ ಒಂದೇ! ಬಿಟ್ಟುಬಿಡಿ ಅದರಪಾಡಿಗದನ್ನ !!

3 ಕಾಮೆಂಟ್‌ಗಳು:

ಚುಕ್ಕಿಚಿತ್ತಾರ ಹೇಳಿದರು...

” ಪರಿಮಳ ” ದ ಬಗೆಗಿನ ವಿವರಣೆ ಮಧುರವಾಗಿದೆ....!

ಕ್ಷಣ... ಚಿಂತನೆ... ಹೇಳಿದರು...

ಶ್ವೇತಾ ಅವರೆ,
'ಪರಿಮಳ'ದ ಬಗೆಗಿನ ಲೇಖನ ಮೊಳದಷ್ಟಿದ್ದರೂ ಸುವಾಸನಾ ಭರಿತವಾಗಿದೆ. ಖುಷಿ ಕೊಟ್ಟಿತು.

ಸ್ನೇಹದಿಂದ,

ಮನಸಿನಮನೆಯವನು ಹೇಳಿದರು...

ರೀ Shwetha..,

ಪರಿಮಳಭರಿತವಾದ ಲೇಖನ.

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...