ಶನಿವಾರ

ಶಾಲ್ಮಲೆ ನಕ್ಕಳಾ?

ಶಾಲ್ಮಲೆ ಯಾವತ್ತೂ ಹಾಗೇ, ಮುನಿಸಿಕೊಂಡದ್ದೇ ಇಲ್ಲ ಅಂದರೆ ತಪ್ಪಾಗುತ್ತದೆ. ‍ಅಲ್ಲದೇ, ಇದನ್ನು ಆಕೆಯ ಅವನು’ ಒಪ್ಪನು.
'ಸಿಟ್ಟು ಒಂದು ಸೊಬಗಂತೆ, ಆಕೆಯ ಪ್ರಕಾರ!
ಆಕೆಯ ಅವನು ಮೌನ ಬಂಗಾರ ಅನ್ನುವದರಲ್ಲೇ ಜೀವನ ಕಳೆಯಬೇಕೆಂದಿದ್ದವ.
ನೋಡು ಸುಮ್ಮನೆ ನೋಡು ದೃಶ್ಯದಲಿ ತಲ್ಲೀನನಪ್ಪನ್ನೆಗಂ ನೋಡು !
ಅದರೊಳೊಂದಾಗುವದೆ ಪರಮ ರಸಿಕತೆ! ಅದಕೆ
ಮಿಗಿಲಿಹ ರಸಾನಂದ ಮತ್ತೆ ಬೇರೊಂದಿಲ್ಲ” - ಕುವೆಂಪು
ಎನ್ನುತ್ತಾ ಆತ ಬರಿದೇ ನಕ್ಕು ಬಿಡುತ್ತಾನೆ. ಅರ್ಥವಾಗುವದಿಲ್ಲ ಇಬ್ಬರೂ!

ತತ್ ಈ ಶಾಲ್ಮಲೆಯೊಂದಿಲ್ಲದಿದ್ದರೆ ..ರೇ ರೇ ಉಹುಮ್..ಮುಂದೆ ಮಾತು ಹೊರಡುವದೇ ಇಲ್ಲ.ಇದುರಿಗೆ ಶಾಲ್ಮಲೆ ನಿಂತಾಗ,ಮಾತು ಹೊರಕ್ಕೆ ಬರುವದೇ ಇಲ್ಲ. ಅದು ಹಾಗೇ.ಆಕೆಯೆಂದರೆ ಗೌರವವಾ,ಅತಿಯಾದ ಪ್ರೀತಿಯ? ಅದು ಆಕೆಗೂ ಅರ್ಥವಾಗಿಲ್ಲ.
ಬದುಕುತ್ತಾ ಹೊಗಬೇಕು ಇದು ಅವನ ಸಿದ್ಧಾಂತ.ಹಾನ್, ಸಿದ್ಧಾಂತವೆಂದೆಲ್ಲ ಕರಿಯಲಿಕ್ಕೆ ಅವ ತಯಾರಿಲ್ಲ.

ಜೀವನಕ್ಕೊಂದು ಗುರಿ ಇರಬೇಕು, ಸಿದ್ಧಾಂತ ಇರಬೇಕು, ನಂಬಿಕೆ ಇರಬೇಕು,ಬಾಳಲಿಕ್ಕೆ Scientific Reason ಬೇಕು, ಯಾಕೆಂದು ಪ್ರಶ್ನಿಸಬೇಕು,ಇಲ್ಲವಾದರೆ ಅದು ಮೌಢ್ಯವಾಗುತ್ತದೆ. ಇದೆಲ್ಲ ಏನಿದ್ದರು ನಮ್ಮ ಶಾಲ್ಮಲೆಯದು.

 ಕೆಲವೊಮ್ಮೆ, ಪ್ರಶ್ನೆಯೂ ಮುಖ್ಯವಲ್ಲ, ಉತ್ತರವೂ ಮುಖ್ಯವಲ್ಲ, ಅವೆರಡರ ನಡುವಿನ ಗೊಂದಲ,ತಳಮಳ ದ್ವಂದ್ವ ಮತ್ತು ಮೌನ ಬಹಳ ಮುಖ್ಯವಾದುದು ಅನ್ನಿಸುತ್ತದೆ & ಬದುಕಲಿಕ್ಕೆ Scientific Reason ಬೇಕಿಲ್ಲ ಅಲ್ಲವಾ? -ಇದು ಶಾಲ್ಮಲೆಯ ಅವನದ್ದು.

ನನಗಂತು ನೂರಕ್ಕೆ ನೂರು ಸತ್ಯ ಅನ್ನಿಸಿತ್ತು.ಅವನ ಮಾತನ್ನೆ ಹಾಗೆಯೇ ಫೇಸ್ ಬುಕ್ ವಾಲ್ನಲ್ಲಿ ಹಾಕಿದಾಗ, ನನ್ನ ಹಲವು ಸ್ನೇಹಿತರುಗಳಾದ ಪಲ್ಲವಿ,ಕವಿತಾ,ಪ್ರಸಾದು ,ಹೌದೆಂದಿದ್ದರು. ಶಾಲ್ಮಲೆಯ ಸಿಟ್ಟು ಈಗ ನನ್ನ ಮೇಲೆ ತಿರುಗಿರಬೇಕು.ಸಧ್ಯ ಮಾತಿಗೆ ಸಿಕ್ಕಿಲ್ಲ.
ಶಾಲು, ಬೇಕುಗಳಲ್ಲೆ ಜೀವನ ತುಂಬಿಸ್ಕೋತೀಯೇನೆ ಹುಚ್ಚಿ, ಅನ್ನುತ್ತಾನೆ.
ತಿಂಗಳದ ಆ ನಾಲ್ಕು ದಿನಗಳಲ್ಲಿ ಶಾಲುವಿನವದ್ದಾಟ ಆಕೆಯ ಅವನನ್ನ ಕಂಗೆಡಿಸುತ್ತದೆ. Painkiller ತೆಗೆದು ಕೊಳ್ಳದೆ ಹಾಗೆಯೇ ಒದ್ದಾಡುವ ಆಕೆಯನ್ನ ನೋಡುತ್ತ ಸುಮ್ಮನೆ ಕುಳಿತುಬಿಡುತ್ತಾನೆ, ಹೆಣ್ಣಿಗಿಂತ ಮೃದುವಾಗಿ ಬಿಡುತ್ತಾನೆ,ತಾನೇನು ಮಾಡಬೇಕೆಂದು ತಿಳಿಯದೆ ಶಾಲುವಿನ ಹಿಂದೆಯೇ ಸುತ್ತುತ್ತಾನೆ,ಬಾಲ ಸುಟ್ಟ ಬೆಕ್ಕಿನಂತೆ.ಆಕೆಗೆ ಅದು ಅರ್ಥವಾಗುವದೆ ಇಲ್ಲ. ಅರ್ಥವಾಗುವದಿಲ್ಲವೋ, ಅರ್ಥಮಾಡಿಕೊಳ್ಳಲಿಕ್ಕೆ ಯತ್ನಿಸುವದಿಲ್ಲವೋ, ನನಗಂತು ಬಗೆಹರಿಯುವದಿಲ್ಲ.

ನೋವು ಸಹಿಸುವ ಆಕೆ ಆತಂಗೆ ವಿಸ್ಮಯವಾಗಿ ಕಾಣುತ್ತಾಳೆ. ಒಂದು ಗುಳಿಗೆನುಂಗಿ ನಗಲಿಕ್ಕೆ ಆಗುವದಿಲ್ಲವ ಅಂದರೆ, ಇಲ್ಲ ಅಂತವುಗಳನೆಲ್ಲ ನುಂಗಬಾರದು, ಆರೋಗ್ಯಕ್ಕೆ ಒಳ್ಳೆಯದಲ್ಲ, ಮುಂದೆ ಏನೇನೊ ಆಗಿಬಿಡುತ್ತದಂತೆ, ಶಾಲು ನಿಜಕ್ಕು ಆತನನ್ನು ಹೆದರಿಸುತ್ತಿದ್ದಾಳೆ ಅನ್ನಿಸುತ್ತದೆ.

ತನ್ನ ಮಿತಿಗೆ ಬಗೆಹರಿಯದ್ದು ಎಂದು ಸುಮ್ಮನಾಗುತ್ತಾನೆ.
ಮುಂದೆ ಎಂದೋ,ಎನೇನೋ ಆಗಿಬಿಡುತ್ತದೆಯೆಂದು ಇಂದು ಯೋಚಿಸುವ ಶಾಲ್ಮಲೆ ಆತಂಗೆ 'ಪ್ರಶ್ನೆ'ಯಾಗಿದ್ದಾಳೆ.
ಶಾಲು ಯಾಕೇ ಹೀಗೆ ನೀನು ?
ಅಳು ಬಂದಾಗ ಅತ್ತುಬಿಡು, ನಗು ಬಂದಾಗ ನಕ್ಕುಬಿಡು ಎನ್ನುವ 'ಅವ' ಶಾಲ್ಮಲೆಯ ಆ ನಗುವಿಗಾಗಿ ಕಾಯುತ್ತಿದ್ದಾನೆ. ಶಾಲ್ಮಲೆ ನಕ್ಕಳಾ?

1 ಕಾಮೆಂಟ್‌:

shridhar ಹೇಳಿದರು...

Shalamale Nakakre Santoshave .. Ondomme Shalmale attare matra suttalinvarella matash !!!!!

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...