ಮಂಗಳವಾರ

 ಪುಟಗಳು ತೇಲಿ ಬಂದಿದ್ದು ಹೀಗೆ .....

ಮನಸ್ಸು ರಿಲ್ಯಾಕ್ಸ್ ಆಗಲು ಕಂಡುಕೊಂಡ ಹಾದಿ ಬರಹ.

ನೋಡಿದ್ದು ,ಕೇಳಿದ್ದು ,ಗಾಳಿಯಲ್ಲಿ ತೇಲಿ ಬಂದದ್ದು ,ಈಮೇಲ್ ನಲ್ಲಿ ಸ್ನೇಹಿತೆ ಕಳುಹಿಸಿದ್ದ ಚಿಕ್ಕ ಹೈಕು ,ಸಣ್ಣ ಕಥೆ ,ಅಮ್ಮ ಫೋನ್ ನಲ್ಲಿ ಹೇಳಿದ್ದ ಸುದ್ದಿ ,ಎಲ್ಲವಕ್ಕೂ ಒಂದು ಹೊಸ ಟಚ್ ಕೊಟ್ಟು ,ನನ್ನ ಮನಸು ಹೇಳಿದ್ದನ್ನ ಕೇಳಿ ,ಇದನ್ನು 'ಆಕೆ ' ಯಾವಾಗ ಹೇಳಿರಬಹುದು ಎಂದು ಒಂದು ಚಿಕ್ಕ ಗೆಸ್ ವರ್ಕ್ ಮಾಡಿ ,ಎಲ್ಲ ಕೂಡಿಸಿ,ಕಳೆದು ಕಟ್ಟಿ ,ಒಂದು ಹೊಸ ತೆರನಾದ ಲೋಕಕ್ಕೆ ಕರೆದೊಯ್ಯುವ ಪ್ರಯತ್ನ ..

ನನ್ನ ಮೊದಲ ಬ್ಲೋಗನ್ನು ೩ ವರುಷಗಳ ಹಿಂದೆಯೇ ಆರಂಭಿಸಿದ್ದೆ ..ಆಗೊಂದು ಈಗೊಂದು  ಜಲನಯನ ಸರ್     ಹೇಳಿದ ಹಾಗೆ ಮಿಸ್ಸೈಲ್  ನಂತೆ  ಒಂದೊಂದನ್ನು ಬರೆಯುತ್ತಿದ್ದೆ . ..ಕನ್ನಡ ಮತ್ತು ಆಂಗ್ಲ ಮಿಶ್ರಿತ ಲೇಖನ ಗಳನ್ನು ಬರೆಯಬೇಕೆನಿಸಿದಾಗ ಬರೆದು ಬಿಟ್ಟೆ ...ಆದರೆ ಯಾಕೋ ಗೊತ್ತಿಲ್ಲ ಸಮಾಧಾನವೇ ಆಗಿರಲಿಲ್ಲ... ಕನ್ನಡ ವನ್ನು ಬೇರೆಯದೇ  ಬ್ಲೋಗಿನಲ್ಲಿ  ಬರೆಯೋಣ ಅನ್ನಿಸಿತ್ತು ,,,ಇಂದು ಅದನ್ನು ಆರಂಭಿಸಿಬಿಟ್ಟಿದ್ದೇನೆ...


ನೀವು ಓದಿ ,ಮನಸಿಗೆ ಖುಷಿ ಅನಿಸಿದರೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ,ಸಲಹೆ ,ಪ್ರೋತ್ಸಾಹ ನಿಮ್ಮಿಂದ ತೇಲಿ ಬರುತ್ತಿರಲಿ ಎಂಬುದು ನನ್ನ ಚಿಕ್ಕ ಆಶಯ....

ಬರೆಯಲೇಬೇಕೆನ್ನುವ ಹಟವಲ್ಲ, ಬರೆದರೆ ನಾನು ಪ್ರಖ್ಯಾತಿ ಪಡೆಯಬಲ್ಲೆ ಎಂಬ ಹಮ್ಮೂ ಇಲ್ಲ ಯಾಕೆ ಗೊತ್ತಾ ? ನಾನೊಬ್ಬ ಮನಸ್ಸಿನ ಮಾತು ಕೇಳುವವ ...ಮನಕ್ಕೆ ಸರಿ ಅನ್ನಿಸಿದ್ದನ್ನು ಯಾರ ಹಂಗು ಇಲ್ಲದೇ ಕಾರ್ಯರೂಪಕ್ಕೆ ಇಳಿಸುವವ. ನನಗೆ ವಾರಕ್ಕೊಂದು ಬರೆಯಲೇ ಬೇಕೆಂಬ ಹಟವಿಲ್ಲ .ಒಂದು ದಿನ ಒಂದು ಸಂಜೆ ಮನೆಯ ತೆರೆಸಿನ ಮೇಲೆ ಹತ್ತಿ ಕುಳಿತಾಗ ಯಾಕೋ ಬರೆಯ ಬೇಕೆನ್ನಿಸುತ್ತದೆ ,ಓದುತ್ತಿರುವ ಮೋಡ ನೋಡುತ್ತಾ ಕುಳಿತಿದ್ದಾಗ ಯಾವಾಗಲೋ ಒಮ್ಮೆ ಈಗ ಬರೆಯುವೆ ಎಂಬ ಉಲ್ಲಾಸ ಮನೆಮಾಡಿಬಿಡುತ್ತೆ ,ಆಗ ನಾನು ಬರೆಯುವದನ್ನ ಯಾರೂ ತಪ್ಪಿಸಲಾಗುವದಿಲ್ಲ...

4 ಕಾಮೆಂಟ್‌ಗಳು:

ಪಾಚು-ಪ್ರಪಂಚ ಹೇಳಿದರು...

All the very best..!

ಕ್ಷಣ... ಚಿಂತನೆ... ಹೇಳಿದರು...

ಬರೆಯಿರಿ, ಹೊಸ ವಿಚಾರಗಳು ತೇಲಿಬರಲಿ. ನಾವೂ ಓದುವಂತಾಗಲಿ.

ಸಾಗರದಾಚೆಯ ಇಂಚರ ಹೇಳಿದರು...

Good luck

waiting for new article

ಶಿವಪ್ರಕಾಶ್ ಹೇಳಿದರು...

all the best to ತೇಲಿ ಬಂದ ಪುಟಗಳು :)

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...