ಗುರುವಾರ



ನಾಕೇ ನಾಕು ತಂತಿ.....



ಅಬ್ಬಾ ಎಷ್ಟೋ ದಿನಗಳು ಅಲ್ಲಲ್ಲ ತಿಂಗಳುಗಳೆ ಸರಿದು ಹೋಗಿದ್ದಾವೆ ಏನನ್ನು ಬರೆಯದೇ. ಮಳೆಗಾಲ ಕಳೆದು ,ಚಳಿಗಾಲ ಮುಗಿದು ಬಿರು ಬೇಸಿಗೆಯೂ ಕೈಬೀಸಿ ಹೋಗಿಬರುತ್ತೇನೆ ಅನ್ನುತ್ತಿದೆ. ಮತ್ತೆ ವರುಣ ದೇವರ ಕೃಪೆಯಿಂದ ಆಗಸದಲ್ಲಿ ಮೋಡಗಳು ತೇಲಿ ಕುಬೇರನ ಲೋಕದ ನೆನಪನ್ನ ತರುತ್ತಿವೆ(ಕುಬೇರನ ಲೋಕವನ್ನ ಯಾವತ್ತು ನೋಡಿದ್ದೀಯಾ ಎಂದು ಕೇಳಬೇಡಿ, ಹಾಗೆ ಸುಮ್ಮನೇ..),ಆಗಾಗ ಆಂಗ್ಲ x, y, z, ಬರೆಯುವ ಕೋಲ್ಮಿಂಚುಗಳು, ನೆನ್ನೆ ಮೊನ್ನೆಯ ಗುಡುಗುಗಳು,ಬೆಂಗಳೂರಲ್ಲಿ ಮಳೆಗಾಲ ಶುರುವೇ ಆಗಿಬಿಟ್ಟೀತೇನೋ ಎಂಬ ಫೀಲ್ ಕಟ್ಟಿಕೊಟ್ಟಿವೆ.
ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ, ನೆಗೆದಂತೆ ದಿನಗಳೆಲ್ಲ ಕಳೆದೆ ಹೋಗಿವೆ.ಇಷ್ಟೆಲ್ಲಾ ದಿನಗಳಲ್ಲಿ ಎಷ್ಟೆಲ್ಲಾ ಘಟನೆಗಳು ನಡೆದು ಹೋಗಿದ್ದಾವೆ
ಒತ್ತಡದ ಜೀವನಕ್ಕೊಂದು ತಡವಾದ ವಿಶ್ರಾಂತಿ ದೊರಕಿದೆ.ಬಹಳ ದಿನಗಳಿಂದ ಹಲವು ಅನಿಸಿಕೆಗಳು ತೇಲಿ ಬರುತ್ತಲೇ ಇದ್ದವು, ಎಲ್ಲವನ್ನು ಕೂಡಿಹಾಕಲಿಕ್ಕಾಗಿರಲಿಲ್ಲವಷ್ಟೇ.



*****ಒಂದು*****

ಬಿಡುವಿನ ವೇಳೆಯಲ್ಲಿ ಹಲವು ಪುಸ್ತಕಗಳನ್ನು ಓದಿ ಮುಗಿಸಿದೆ ಎನ್ನುವದು ಒಂದು ಸಾಧನೆಯ ಅಧ್ಯಾಯ. ಹಾಂ ಹೇಳಬೇಕೆಂದರೆ, ಬೇಂದ್ರೆಯವರ ಕವನ ಸಂಕಲನಗಳನ್ನು ಮತ್ತೆ ಓದಿದೆ ಈ ಬಾರಿ ಹೊಸದೊಂದೇ ಅರ್ಥ ಹುದುಕಿದೆ.ಹುಡುಕಿದೆ ಅನ್ನುವದಕ್ಕಿಂತ ದೊರಕಿದೆ ಅನ್ನುವದೇ ಸೂಕ್ತವಾದೀತು. ಪುಸ್ತಕಗಳನ್ನು ನೋಡಿದಾಗ ರುಚಿಕಟ್ಟಾದ ಭೋಜನ ದ ಚಿತ್ರ ಕಣ್ಮುಂದೆ ಬರುತ್ತದೆ ನನಗೆ. ಇದುವರೆಗೂ ಪುಸ್ತಕಗಳು ನೀಡಿದ ಕುಷಿಯನ್ನ ಮತ್ತೆಲ್ಲೂ ಹುಡುಕಲಿಕ್ಕಾಗಲಿಕ್ಕಿಲ್ಲ ಅನ್ನುವದು ಕುಷಿಯೂ ಅಲ್ಲದ ಬೇಜಾರು ಇಲ್ಲದ ಸಂಗತಿ .ಒಂದೇ ಉಸಿರಿನಲ್ಲಿ ಓದಿದ, ಖಲೆದ್ ಹೋಸೆನಿಯ 'Thousand Splendid Suns ಕಾದಂಬರಿ - ಸುಂದರ ಆಫ್ಘಾನಿಸ್ತಾನಕ್ಕಾದ ಗತಿಗಾಗಿ ಮರುಗುತ್ತದೆ, ಮತ್ತು ನಾನು ಭಾರತದಲ್ಲಿ ಜನಿಸಿದ ಬಗ್ಗೆ ಬಹಳ ಕುಶಿಯಾಗುತ್ತದೆ. ಆ ಕಾದಂಬರಿ ಓದಿದ ಕೂಡಲೇ ಅನಿಸಿದ್ದು ಇಷ್ಟೇ -'ನಾನು ಆಫ್ಘಾನ್ ದೇಶದಲ್ಲಿ ಹುಟ್ಟಲಿಲ್ಲವಲ್ಲ ಸಧ್ಯ'.ಅಫಘಾನಿನ ಜನರ ಬಗ್ಗೆ ಮರುಕ ಹುಟ್ಟಿಸುತ್ತದೆ,ಕತೆಯಲ್ಲಿನ ಮರಿಯಂ ಮತ್ತು ಲೈಲ ಎಂಬ ಇಬ್ಬರು ಮಹಿಳೆಯರು ಅಫಘಾನಿನ ಮಹಿಳೆಯರನ್ನ ಪ್ರತಿನಿಧಿಸುತ್ತಾರೆ, ಅಲ್ಲಿನ ಬಡತನ, ಯುದ್ಧ ಮತ್ತು ಅದರ ಪರಿಣಾಮಗಳು,ಮಹಿಳೆ ಗಿರುವ ಸ್ಥಾನಮಾನಗಳು ಎಲ್ಲವನ್ನ ಜಾಹೀರು ಮಾಡಿದೆ ಈ ದೊಡ್ಡ ಕಾದಂಬರಿ.ಖಲೆದ್ ಹೋಸೆನಿ , ಕೊಡುವ ವಿವರಣೆ, ಮರಿಯಂ ಪಾತ್ರವನ್ನ ಚಿತ್ರಿಸಿದ ಬಗೆ, ಮರಿಯಂನ ತಲೆಯಲ್ಲಿ ಬಂದು ಹೋಗುವ ವಿಚಾರಗಳ ನಿರೂಪಣೆ,ಎಲ್ಲವನ್ನ ಓದಿ ಮುಗಿಸುವ ಹೊತ್ತಿಗೆ, ನಿಮ್ಮಿದುರಲ್ಲಿ ,ಕಾಬೂಲ್, ಮರಿಯಂ,ಮತ್ತು ಎಲ್ಲ ಸಂಘರ್ಷಗಳಿಂದ ಎರಡು ದಿನಕ್ಕಾಗುವ 'hangover' ತಯಾರಾಗಿ ಬಿಡುತ್ತದೆ.



*****ಎರಡು*****


ಹಲವು ಒಳ್ಳೆಯ ಚಲನ ಚಿತ್ರಗಳನ್ನ ನೋಡುತ್ತೇನೆ , ಒಂದು ಸಾರೆಯಲ್ಲ ಹಲವು ಸಾರೆ.... ಮೊದಲ ಬಾರಿ ನೋಡುವಾಗ ಕಣ್ಣು ಬಿಟ್ಟುಕೊಂಡು,ಬಾಯೀ ಮುಚ್ಚಿಕೊಂಡು ನೋಡಿದರೆ ಮುಂದಿನ ಬಾರಿಯೆಲ್ಲ ಇವ ಈ ಕತೆಯನ್ನ ಒಂದು ಚೂರು ಹಿಂಗೆ ಮಾಡಿದ್ರೆ ಛೋಲೋ ಇತ್ತಲ್ಲ, ಈ ನಾಯಕನ ಚಿತ್ರಣ ಹೀಗಿದ್ದರೆ ಚೆನ್ನ, ನಾಯಕಿಗೆ ಅವಕಾಶ ಕಡಿಮೆ ಆದಹಾಗೆ ಅನಿಸುತ್ತಿದೆ, ಕತೆಯಲ್ಲಿ ಗಟ್ಟಿತನವಿಲ್ಲ,ಈ ಕತೆ ಮುಗಿಯದ ಹ್ಯಾಂಗೋವರ್ ಉಳಿಸಿದೆ ಅಲ್ಲ, ಎಂದೆಲ್ಲ ಯೋಚಿಸುತ್ತಾ, ಚಲನ ಚಿತ್ರದ ಕೊನೆಯ ಭಾಗಕ್ಕೆ ಕಾಯತೊಡಗುತ್ತೇನೆ : ಹಲವು ಚಲನ ಚಿತ್ರಗಳ 'ಮುಕ್ತಾಯ' ಬಹಳ ಸೂಕ್ಷ್ಮವಾಗಿರುತ್ತವೆ (ನಾನು ಹೇಳುತ್ತಿರುವದೆಲ್ಲ ಕಲಾತ್ಮಕ ಚಿತ್ರಗಳ ಬಗ್ಗೆ ನೆನಪಿರಲಿ.) ಅಷ್ಟೇ ಅಲ್ಲದೇ ಮನತಟ್ಟುವಂತಿರುವ, ಚಿತ್ರಗಳೆ ಮಾತಾಡುವ 'ಅಂತಿಮ' ಭಾಗವೇ ಕೆಲವು ಸಾರೇ ಚಲನ ಚಿತ್ರದ ಯಶಸ್ಸಿಗೆ ಕಾರಣ ವಾಗುತ್ತದೆ.ಇಲ್ಲಿ ಯಶಸ್ಸು ಎನ್ನುವದು ಪ್ರೇಕ್ಷಕರ ಮೆಚ್ಚುಗೆ ಮಾತ್ರ ಸೀಮಿತ.'ಮಡಗಾಸ್ಕರ್ ೩' ಬೆಂಗಳೂರಲ್ಲಿ ತಯಾರಾಗುತ್ತಿದೆ ಎಂಬುದನ್ನು ಕೇಳಿ ಬೆಂಗಳೂರಿಗೆ 'ಹಾಲಿವುಡ್ ವ್ಯಾಲ್ಯೂ' ವಾಹ್ ಎಂದು ಕುಶಿ ಪಡುತ್ತೇನೆ.'Cow' ಚಲನಚಿತ್ರ ದಂತಹ ಚಿತ್ರಗಳನ್ನು ನೋಡುವಾಗ ಅದೇ ಗುಂಗಿನಲ್ಲಿ ಎರಡು ದಿನಾ ಹಾಗೆ ಕಳೆದು ಹೋಗುತ್ತದೆ.


***** ಮೂರು*****

ಅದರೊಟ್ಟಿಗೆ,

ಬಂಗಾಲದಲ್ಲಿ ಸೂರ್ಯೋದಯವಾಗಿದೆ, ಚಟ-ಪಟ ಮಾತಾಡುವ ಸರಳ ಜೀವಿ 'ದೀದಿ' ಮಮತ ಅಧಿಕಾರಕ್ಕೆ ಬಂದಿದ್ದಾರೆ. ಪಕ್ಕದ ತಮಿಳುನಾಡಲ್ಲಿ 'ಅಮ್ಮ' ವಿಜಯ ಭೇರಿ ಬಾರಿಸಿದ್ದಾರೆ,ಮಹಿಳಾ ಮಣಿಗಳ ಯಾತ್ರೆ ಹೀಗೆ ಮುಂದುವರಿಯಲಿ. ವಾರ್ತಾ ವಾಹಿನಿಗಳು ಇನ್ನು ಸಾಕೆಂದು ಒಸಾಮ ಮತ್ತು ಓಬಾಮರ ಸುದ್ದಿಗಳನ್ನು, ತಕ್ಕಮಟ್ಟಿಗೆ ನಿಲ್ಲಿಸಿದ್ದಾರೆ. ವಾರಗಟ್ಟಲೆ ಅದೇ ಅದೇ ಸುದ್ದಿಯನ್ನ, ವಿಕಾರಗೊಂಡ ಭಯಾನಕ ಛಾಯಾಚಿತ್ರಗಳನ್ನ ನೋಡಿ ನೋಡಿ ಬೇಸತ್ತಿದ್ದ ಮನಕ್ಕೆ 'ಕೆನ್ಸ್ ಚಲನ ಚಿತ್ರೋತ್ಸವ' ಸ್ವಲ್ಪ ತಂಪು ತಂದಿದೆ:). ಐ ಪಿ ಲ್ ಮತ್ತು ಬೇಸಿಗೆಯ ರಜ ಮುಗಿಯುತ್ತಿದೆ.




3 ಕಾಮೆಂಟ್‌ಗಳು:

ಜಲನಯನ ಹೇಳಿದರು...

ಶ್ವೇತ...ಮದುಮಗಳ ಮುದುಮನದ ಮನೋಭಾವದ ಮಂಥನಕ್ಕೆ...ಬ್ಲಾಗ್ ಒಳ್ಲೆ ಸಾಧನ...ಚನ್ನಾಗಿದೆ...

Sandeep K B ಹೇಳಿದರು...

ನಾಲ್ಕನೆಯದು ಕಾಣಿಸ್ತಾ ಇಲ್ಲ ......

Raghu ಹೇಳಿದರು...

ತುಂಬಾ ಚೆನ್ನಾಗಿದೆ ಈ ಬರಹ..
ನಿಮ್ಮವ,
ರಾಘು.

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...